Advertisement

ಚಿನ್ನ ಕಳ್ಳಸಾಗಣೆ ಪ್ರಕರಣ : 12 ಮಂದಿಯ ಜಾಮೀನು ರದ್ದತಿಗೆ ಸುಪ್ರೀಂ ನಕಾರ

09:47 PM Jul 13, 2021 | Team Udayavani |

ನವದೆಹಲಿ: ಕೇರಳದಲ್ಲಿ ಕಳೆದವರ್ಷ 30 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದಿರುವ 12 ಮಂದಿಯ ಜಾಮೀನು ರದ್ದುಪಡಿಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.

Advertisement

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇವರ ಜಾಮೀನು ರದ್ದು ಮಾಡಿ ಎಂದು ಕೋರಿಕೊಂಡಿತ್ತು. ಇದನ್ನು ನಿರಾಕರಿಸಿರುವ ನ್ಯಾಯಪೀಠ, ಇವರೆಲ್ಲ ಸರ್ಕಾರಿ ಉದ್ಯೋಗಿಗಳು, ಆದ್ದರಿಂದ ಜಾಮೀನು ರದ್ದು ಮಾಡಲು ಸಾಧ್ಯವಿಲ್ಲ ಎಂದಿದೆ. ಆದರೂ ಚಿನ್ನ ಸಾಗಣೆ ಭಯೋತ್ಪಾದನೆ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕೇರಳ ಉಚ್ಚ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸಲು ಒಪ್ಪಿಕೊಂಡಿದೆ.

ಕೇರಳ ಉಚ್ಚ ನ್ಯಾಯಾಲಯ ಚಿನ್ನ ಕಳ್ಳಸಾಗಣೆ ಸೀಮಾಸುಂಕ ಕಾಯ್ದೆ ವ್ಯಾಪ್ತಿಗೆ ಬರುತ್ತದೆ, ಅಕ್ರಮ ಚಟುವಟಿಕೆ ನಿಗ್ರಹ ಕಾಯ್ದೆಯಡಿ (ಯುಎಪಿಎ) ಬರುವುದಿಲ್ಲ ಎಂದಿತ್ತು. ಈ ಚಟುವಟಿಕೆಯಲ್ಲಿ ಭಯೋತ್ಪಾದಕರ ಕೈವಾಡವಿರುವುದನ್ನು ಪರಿಶೀಲಿಸುತ್ತಿರುವ ಎನ್‌ಐಎ, ಕೃತ್ಯವನ್ನು ಇದೇ ದೃಷ್ಟಿಯಲ್ಲಿ ತನಿಖೆಗೊಳಪಡಿಸುತ್ತಿದೆ.

ಇದನ್ನೂ ಓದಿ : ದಕ್ಷಿಣ ಕನ್ನಡ, ಉಡುಪಿ ಸೇರಿ ಹಲವು ಜಿಲ್ಲೆಗಳಲ್ಲಿ ಇನ್ನೂ 3-4 ದಿನ “ಯೆಲ್ಲೋ ಅಲರ್ಟ್‌’

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next