Advertisement

ಬೆಂಗಳೂರಿನ ಉದ್ಯಮಿ ಗೋಕರ್ಣದಲ್ಲಿ ಸಮುದ್ರಪಾಲು

10:45 PM Oct 29, 2022 | Team Udayavani |

ಕುಮಟಾ: ಬೆಂಗಳೂರಿ ನಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದ ಖಾಸಗಿ ಕಂಪೆನಿ ಉದ್ಯೋಗಿಯೊಬ್ಬರು ಸಮುದ್ರದ ಅಲೆಗಳ ರಭಸಕ್ಕೆ ಸಿಕ್ಕಿ ಮೃತಪಟ್ಟ ಘಟನೆ ಗೋಕರ್ಣದ ಮುಖ್ಯ ಸಮುದ್ರತೀರದಲ್ಲಿ ಸಂಭವಿಸಿದೆ.

Advertisement

ಗೋಕರ್ಣ ರುದ್ರಪಾದದ ಬಳಿ ಈ ಘಟನೆ ನಡೆದಿದ್ದು, ಅಭಿಷೇಕ (29) ಮೃತಪಟ್ಟವರು. ಬೆಂಗಳೂರಿನಿಂದ ನಾಲ್ವರು ಸ್ನೇಹಿತರೊಂದಿಗೆ ಬಂದಿದ್ದ ಅವರು, ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳಿಗೆ ಸಿಲುಕಿದ್ದಾರೆ. ಅವರನ್ನು ರಕ್ಷಿಸಲು ಲೈಫ್‌ಗಾರ್ಡ್‌ ಸಿಬಂದಿ ಪ್ರಯತ್ನಿಸಿದ ರಾದರೂ ಸಾಧ್ಯವಾಗಲಿಲ್ಲ. ಗೋಕರ್ಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next