Advertisement

ಗಾಂಧಿ ನಾಡಲ್ಲಿ ಗೋಡ್ಸೆ ಹೀರೋ ಆಗ್ತಿದ್ದಾರೆ: ದೇವನೂರು ಮಹಾದೇವ

04:07 PM Jan 22, 2018 | Sharanya Alva |

ದಾವಣಗೆರೆ: ರಾಷ್ಟ್ರಪಿತ ಗಾಂಧಿ ನಾಡಲ್ಲಿ ಗೋಡ್ಸೆ ಹೀರೋ ಆಗ್ತಿದ್ದಾರೆ. ದೇಶದಲ್ಲೀಗ ಪೇಶ್ವೆ ಮಾದರಿ ಆಡಳಿತವಿದೆ ಎಂದು ಸಾಹಿತಿ ದೇವನೂರು ಮಹಾದೇವ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಸೋಮವಾರ ಸ್ವರಾಜ್ ಇಂಡಿಯಾ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಪಕ್ಷ ವಚನಭ್ರಷ್ಟರು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆಯಂತೆ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ. ಹೀಗಾಗಿ ಮೋದಿ ವಚನ ಭ್ರಷ್ಟರಾಗಿದ್ದಾರೆ. ಕಾಂಗ್ರೆಸ್ ಪಕ್ಷದವರು ಕೂಡಾ ಇದಕ್ಕೆ ಹೊರತಾಗಿಲ್ಲ. ಕಾಂಗ್ರೆಸ್ ಪಕ್ಷದವರು ಭರವಸೆ ಮಾತ್ರ ನೀಡುತ್ತಾರೆ. ಆದರೆ ಅದನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ವಿಶ್ಲೇಷಿಸಿದರು.

ಇಂತಹ ಸ್ಥಿತಿಯಲ್ಲಿ ನಮಗೆ ಹೊಸ ರಾಜಕೀಯ ಶಕ್ತಿಯ ಅಗತ್ಯವಿದೆ. ರಾಷ್ಟ್ರೀಯ ಪಕ್ಷಗಳು ಒಂದೊಂದು ಸಿದ್ಧಾಂತಕ್ಕೆ ಒಳಪಟ್ಟಿವೆ. ಅವುಗಳಿಂದ ಪ್ರಾದೇಶಿಕ ನೆಲೆಯಲ್ಲಿ ನ್ಯಾಯ ನಿರೀಕ್ಷಿಸೋದು ಕಷ್ಟ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next