Advertisement

Goa: ವಿಧಾನಸಭೆಯ ಮುಂಗಾರು ಅಧಿವೇಶನ ಕಲಾಪದಲ್ಲೂ ಟೊಮ್ಯಾಟೋ ಚರ್ಚೆ

05:49 PM Jul 18, 2023 | Team Udayavani |

ಪಣಜಿ: ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದೆ. ಟೊಮೆಟೊ ಕೆಜಿಗೆ 150 ರೂ. ಟೊಮೇಟೊ ಬೆಲೆ ಏರಿಕೆಯಿಂದ ಗೋವಾದ ಜನತೆಯೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಧಾನಸಭೆಯ ಮುಂಗಾರು ಅಧಿವೇಶನ ಕಲಾಪದಲ್ಲಿ ಶಾಸಕ ವಿಜಯ್ ಸರ್ದೇಸಾಯಿ ಇದೇ ಪ್ರಶ್ನೆಯನ್ನು ಎತ್ತಿದ್ದಾರೆ. ಶಾಸಕ ವಿಜಯ್ ಸರ್ದೇಸಾಯಿ ಅವರು ಪ್ರಶ್ನೋತ್ತರ ವೇಳೆಯಲ್ಲಿ ಟೊಮೆಟೊ ಬೆಲೆಗೆ ಸಂಬಂಧಿಸಿದಂತೆ ಪ್ರಶ್ನೆಯನ್ನು ಎತ್ತಿದರು. ಟೊಮೆಟೊ ಬೆಲೆ ಕೆಜಿಗೆ 140 ರೂ.ಗೆ ಏರಿದೆ. ಈ ಬೆಲೆ ಗೋವಾದ ಜನಸಾಮಾನ್ಯರ ಕೈಗೆಟುಕದಂತಾಗಿದೆ. ಈಗ ಸರ್ಕಾರವು ಪ್ರತಿ ಕುಟುಂಬಕ್ಕೆ ಎರಡು ಕಿಲೋ ಟೊಮೆಟೊವನ್ನು ಉಚಿತವಾಗಿ ನೀಡಬೇಕು ಎಂದು ಸರ್ದೇಸಾಯಿ ಹೇಳಿದರು.

Advertisement

ಇದಕ್ಕೆ ಉತ್ತರಿಸಿದ ಕೃಷಿ ಸಚಿವ ರವಿ ನಾಯ್ಕ್, ಟೊಮೇಟೊ ಬೆಲೆ ಏರಿಕೆಯಿಂದ ಗೋವಾಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ವಿಧಾನಸಭೆಯಲ್ಲಿ ಹೇಳಿದರು. ”ಕೃಷಿ ಇಲಾಖೆಯಿಂದ ಟೊಮೇಟೊವನ್ನು ಖರೀದಿಸಿ ಕಡಿಮೆ ದರದಲ್ಲಿ ಗೋವಾದ ಜನತೆಗೆ  ಟೊಮ್ಯಾಟೋವನ್ನು ಪೂರೈಕೆ ಮಾಡಲಾಗುತ್ತಿದೆ. ಗೋವಾದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಗೋವಾ ಜನತೆಗೆ ಬೆಲೆ ಏರಿಕೆಯ ಹೊಡೆತ ಬೀಳುವುದಿಲ್ಲ ಎಂದು ಕೃಷಿ ಸಚಿವ ರವಿ ನಾಯ್ಕ ಅಧಿವೇಶನದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
ಕಲಾ ಅಕಾಡೆಮಿಯ ಮೇಲ್ಛಾವಣಿ ಕುಸಿತದ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಲೊಕೋಪಯೋಗಿ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಸಾವಂತ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next