Advertisement

Goa ಸ್ಮಾರ್ಟ್ ಸಿಟಿ ಯೋಜನೆಯ ತನಿಖೆ ನಡೆಸಬೇಕು: ಕಾಂಗ್ರೆಸ್ ಒತ್ತಾಯ

06:05 PM Jun 01, 2023 | Team Udayavani |

ಪಣಜಿ: ರಾಜಧಾನಿ ಪಣಜಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದ್ದು, ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ರವರು ಇಡೀ ಯೋಜನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಗೋವಾ  ಕಾಂಗ್ರೆಸ್ ಮುಖಂಡ ಎಲ್ವಿಸ್ ಗೋಮ್ಸ್ ಒತ್ತಾಯಿಸಿದ್ದಾರೆ.

Advertisement

ಪಣಜಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮ ವಿಭಾಗದ ಅಧ್ಯಕ್ಷ ಅಮರನಾಥ ಪಣಜಿಕರ್, ಪ್ರಧಾನ ಕಾರ್ಯದರ್ಶಿ ವಿಜಯ್ ಭಿಕೆ, ಪಣಜಿ ಮಹಿಳಾ ಬಳಗದ ಅಧ್ಯಕ್ಷೆ ಲವಿನಿಯಾ ಡಿಕೋಸ್ತಾ ಉಪಸ್ಥಿತರಿದ್ದರು.

ಪಣಜಿ ಸ್ಮಾರ್ಟ ಸಿಟಿ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ ಎಂದು ಗೋಮ್ಸ್ ಹೇಳಿದರು. ಭ್ರಷ್ಟಾಚಾರವನ್ನು ಸಾಬೀತುಪಡಿಸುವ ಧೈರ್ಯವನ್ನು ಬಿಜೆಪಿ ಸರ್ಕಾರ ತೋರಿಸಬೇಕು. ಕೇಂದ್ರ ಸಚಿವ ಪುರಿ ಅವರು ಸರ್ಕಾರದ ಮುಖವಾಣಿಯಾಗಿರುವ ಪ್ರೆಸ್ ಇನ್‍ಫರ್ಮೇಷನ್ ಬ್ಯೂರೋವನ್ನು ಬಳಸಿಕೊಂಡು ನಮ್ಮ ವಿರುದ್ಧ ಆರೋಪ ಮಾಡಿದ್ದಾರೆ. ಅವರು ವಾಸ್ತವವಾಗಿ ಪಣಜಿಯ ಜನರನ್ನು ಭೇಟಿ ಮಾಡಲು ವಿಫಲರಾಗಿದ್ದಾರೆ ಮತ್ತು ಸ್ಮಾರ್ಟ್ ಸಿಟಿಯ ನಡೆಯುತ್ತಿರುವ ಕಳಪೆ ಕಾಮಗಾರಿಗಳಿಂದ ಜನತೆ ಹೇಗೆ ಬಳಲುತ್ತಿದ್ದಾರೆ ಎಂದು ಕೇಳಲು ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್, ನಗರಾಭಿವೃದ್ಧಿ ಸಚಿವರು, ನಗರಾಭಿವೃದ್ಧಿ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ, ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಅಧಿಕಾರಿಗಳು ತಪ್ಪಿತಸ್ಥರು. ಅವರೇ ಪ್ರಮುಖ ಆರೋಪಿಗಳು. ಹೀಗಾಗಿ ಅವರ ವಿರುದ್ಧ ತನಿಖೆ ನಡೆಸುವ ಧೈರ್ಯ ಬಿಜೆಪಿಗಿಲ್ಲ ಎಂದು ಆರೋಪಿಸಿದರು.

ಕಪ್ಪು ಬಾವುಟಗಳನ್ನು ಪ್ರದರ್ಶಿಸಲಾಗುವುದು
ಕಳಪೆ ಕಾಮಗಾರಿಯಿಂದ ಯಾರಿಗೆ ಲಾಭವಾಗುತ್ತದೆ ಎಂಬುದು ಗೊತ್ತಿದೆ. ಸ್ಮಾರ್ಟ್ ಸಿಟಿಯ ಕಾಮಗಾರಿಯನ್ನು ಮಾಧ್ಯಮಗಳು ಬಯಲಿಗೆಳೆದಿವೆ. ಈ ಸಚಿವರನ್ನು  ಸಂಪುಟದಿಂದ ತೆಗೆದುಹಾಕಬೇಕು. ಇನ್ನೊಮ್ಮೆ ಇಲ್ಲಿಗೆ ಬಂದರೆ ಕಪ್ಪು ಬಾವುಟ ತೋರಿಸುತ್ತೇವೆ ನಗರದಲ್ಲಿ ಡೇಂಜರ್ ಝೋನ್ ಗಳು ಎಲ್ಲಿವೆ? ಇದನ್ನು ತೋರಿಸಲು ನಾವು ಕಪ್ಪು ಬಾವುಟಗಳನ್ನು ನಿಮ್ಮೊಂದಿಗೆ ಒಯ್ಯುತ್ತೇವೆ ಎಂದು ಅಮರನಾಥ ಪಣಜಿಕರ್ ಹೇಳಿದರು.

ಕಾಂಗ್ರೆಸ್ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತದೆ ಮತ್ತು ಸ್ಮಾರ್ಟ್ ಸಿಟಿ ಭ್ರಷ್ಟಾಚಾರದ ಬಗ್ಗೆ ಮೌನವಾಗಿರುವುದಿಲ್ಲ. ನಾವು ಮಾಡಿರುವ ಕೆಲವು ಆರೋಪಗಳು ಆಧಾರ ರಹಿತವಲ್ಲ. ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ನಾವು ಕೇಂದ್ರ ಸಚಿವ ಪುರಿ ಅವರನ್ನು ನಗರದ ಮೂಲಕ ನಡೆಯಲು ಕೇಳಿದ್ದೆವು. ಆದರೆ ಹಾಗೆ ಮಾಡದೆ ದೆಹಲಿಗೆ ಓಡಿಹೋದರು ಎಂದು ಅಮರನಾಥ ಪಣಜಿಕರ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next