Advertisement

ಅಕ್ಟೋಬರ್ 13 ರಿಂದ ಗೋವಾ-ಶಿರ್ಡಿ ಮಾರ್ಗಕ್ಕೆ ಕದಂಬ ಬಸ್ ಓಡಾಟ ಪುನರಾರಂಭ

05:31 PM Oct 11, 2021 | Team Udayavani |

ಪಣಜಿ: ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಬಂದ್ ಆಗಿದ್ದ ಗೋವಾ-ಶಿರ್ಡಿ ಕದಂಬ ಬಸ್ ಓಡಾಟ ಅಕ್ಟೋಬರ್ 13 ರಿಂದ ಪುನರಾರಂಭಗೊಳ್ಳಲಿದೆ. ಈ ಬಸ್ ಮಡಗಾಂವ-ಪಣಜಿ-ಪುಣೆ-ಶಿರ್ಡಿ ಮಾರ್ಗವಾಗಿ ಓಡಾಟ ನಡೆಸಲಿದೆ ಎಂದು ಗೋವಾ ಕದಂಬ ಮಹಾಮಂಡಳದ ಮುಖ್ಯ ವ್ಯವಸ್ಥಾಪಕ ಸಂಜಯ ಘಾಟೆ ಮಾಹಿತಿ ನೀಡಿದ್ದಾರೆ.

Advertisement

ಲಾಕ್‍ಡೌನ್ ಸಡಿಲಿಕೆಯ ನಂತರ ಕರ್ನಾಟಕದಿಂದ ಕೆಎಸ್‍ಆರ್‍ಟಿಸಿ ಬಸ್ ಗೋವಾಕ್ಕೆ ಓಡಾಟ ಆರಂಭಿಸಿದ ನಂತರ ಗೋವಾದಿಂದಲೂ ಕದಂಬ ಸಾರಿಗೆ ಬಸ್ಸುಗಳ ಕರ್ನಾಟಕಕ್ಕೆ ಓಡಾಟ ಆರಂಭಗೊಂಡಿತ್ತು. ಆದರೆ ಮಹಾರಾಷ್ಟ್ರದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಕದಂಬ ಬಸ್ ಓಡಾಟ ಸ್ಥಗಿತಗೊಳಿಸಲಾಗಿತ್ತು. ಇದೀಗ ಗೋವಾದಿಂದ ಮಹಾರಾಷ್ಟ್ರಕ್ಕೂ ಕೂಡ ಕದಂಬ ಬಸ್ ಓಡಾಟ ಆರಂಭಿಸಲಾಗಿದೆ.

ಲಾಕ್‍ಡೌನ್ ಸಂದರ್ಭದಲ್ಲಿ ಬಂದ್ ಆಗಿದ್ದ ಅಂತರಾಜ್ಯ ಮಾರ್ಗಗಳ ಕದಂಬ ಬಸ್ ಓಡಾಟ ಇದೀಗ ಹಂತ ಹಂತವಾಗಿ ಪುನರಾರಂಭಗೊಳ್ಳುತ್ತಿದೆ. ಆದರೆ ಗೋವಾಕ್ಕೆ ಆಗಮಿಸಲು ಡಬಲ್ ಡೋಸ್ ವ್ಯಾಕ್ಸಿನ್ ಪಡೆದವರಿಗೆ ಅಥವಾ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವವರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next