Advertisement

ಸಾವಂತ್ ಸರ್ಕಾರ ಜಾರಿಗೆ ತಂದಿರುವ ಯೋಜನೆ ಆಮ್ ಆದ್ಮಿ ಸರ್ಕಾರದ ನಕಲು: ವಾಲ್ಮಿಕಿ ನಾಯ್ಕ್

04:33 PM Oct 10, 2021 | Team Udayavani |

ಪಣಜಿ: “ಸರಕಾರ ತುಮಚಾ ದಾರಿ” ಮಾಧ್ಯಮದ ಮೂಲಕ ಗೋವಾ ರಾಜ್ಯ ಸರ್ಕಾರವು “ಕೇಜ್ರಿವಾಲ್” ಸರ್ಕಾರದ ನಕಲು ಮಾಡಿ ವ್ಯರ್ಥ ಪ್ರಯತ್ನ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಗೋವಾ ಪ್ರಮುಖ ವಾಲ್ಮಿಕಿ ನಾಯ್ಕ್ ಠೀಕಾ ಪ್ರಹಾರ ನಡೆಸಿದ್ದಾರೆ.

Advertisement

ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು-ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಪ್ರತ್ಯಕ್ಷವಾಗಿ ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಗಂಭೀರವಾಗಿಲ್ಲ. ಅವರು ಕೇವಲ ಕ್ಯಾಮರಾ ಮುಂದೆ ಮಾತನಾಡುತ್ತಿರುತ್ತಾರೆ. ವಿವಿಧ ಸರ್ಕಾರಿ ಯೋಜನೆಗಳಿಗಾಗಿ ಪ್ರತೀಕ್ಷೆ ಹಾಗೂ ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಸಾವಂತ್ ಸರ್ಕಾರ ಜಾರಿಗೆ ತಂದಿರುವ ಯೋಜನೆ ಆಮ್ ಆದ್ಮಿ ಸರ್ಕಾರದ ನಕಲಾಗಿದೆ ಎಂದು ವಾಲ್ಕಿಕಿ ನಾಯ್ಕ ಆರೋಪಿಸಿದರು.

ದೆಹಲಿಯಲ್ಲಿ ನಾಕರೀಕರಿಗೆ ಟೋಲ್ ಫ್ರಿ ಮೂಲಕ ಮನೆ ಮನೆಗೆ ಸರ್ಕಾರಿ ಸೇವೆಯನ್ನು ತಲುಪಿಸುತ್ತಿದೆ ಎಂದು ವಾಲ್ಮೀಕಿ ನಾಯ್ಕ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next