Advertisement

ಆಮ್ ಆದ್ಮಿ ಪಕ್ಷ ಗೆದ್ದರೆ, ಶೇ 80 ರಷ್ಟು ಗೋವಾದ ಯುವಕರಿಗೆ ಉದ್ಯೋಗ: ರಾಹುಲ್ ಮಾಂಮ್ರೆ

03:50 PM Oct 04, 2021 | Team Udayavani |

ಪಣಜಿ: ಆಮ್ ಆದ್ಮಿ ಪಕ್ಷವು ಗೋವಾದ ಪ್ರತಿಯೊಂದು ಬೂಥ್‍ನಲ್ಲಿಯೂ ಕೇಜ್ರಿವಾಲ್ ರವರ ಎಂಪ್ಲೊಯ್‍ಮೆಂಟ್ ಗ್ಯಾರಂಟಿ ತಲುಪಿಸಲು ಸಜ್ಜಾಗಿದೆ ಎಂದು ಗೋವಾ ಆಮ್ ಆದ್ಮಿ ಪಕ್ಷದ ಪ್ರಮುಖ ರಾಹುಲ್ ಮಾಂಮ್ರೆ ನುಡಿದರು.

Advertisement

ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು- ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವರು ಗೋವಾದಲ್ಲಿ ಸರ್ಕಾರಿ ನೌಕರಿಯಲ್ಲಿ ಪಾರದರ್ಶಕತೆಯನ್ನು ತಂದು ಜನಸಾಮಾನ್ಯರಿಗೆ ಸರ್ಕಾರಿ ನೌಕರಿಯನ್ನು ನೀಡಲಾಗುವುದು ಎಂದು ಅವರು ವಚನ ನೀಡಿದ್ದಾರೆ. ಇಷ್ಟೇ ಅಲ್ಲದೆಯೇ ಪ್ರತಿ ಕುಟುಂಬದಲ್ಲಿ ನಿರುದ್ಯೋಗಿಗಳಿಗೆ ನೌಕರಿ ಲಭಿಸುವವರೆಗೂ ಪ್ರತಿ ತಿಂಗಳು 3000 ರೂ ನೌಕರಿ ಭತ್ತೆ ನೀಡಲಾಗುವುದು. ಖಾಸಗಿ ಕ್ಷೇತ್ರದಲ್ಲಿ ಶೇ 80 ರಷ್ಟು ಗೋವಾದ ಯುವಕರಿಗಾಗಿ ಉದ್ಯೋಗ ಮೀಸಲಿಡಲಾಗುವುದು. ಗಣಿಗಾಗಿಕೆ ಬಂದ್ ಆಗಿರುವುದರಿಂದ ಗಣಿ ಉದ್ಯೋಗ ಅವಲಂಭಿತರಿಗೆ 5000 ರೂ ನೀಡುವುದಾಗಿ ಆಮ್ ಆದ್ಮಿ ಘೋಷಿಸಿದೆ ಎಂದು ರಾಹುಲ್ ಮಾಂಮ್ರೆ ನುಡಿದರು.

ಆಮ್ ಆದ್ಮಿ ಪಕ್ಷಕ್ಕೆ ಗೋವಾದ ಜನತೆ ಪ್ರೀತಿ ನೀಡಿದ್ದಾರೆ. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ರವರು ಇಷ್ಟೊಂದು ಅಭಿವೃದ್ಧಿ ಪಡಿಸಲು ಹೇಗೆ ಸಾಧ್ಯವಾಯಿತು ಎಂಬುದು ಜನರಿಗೆ ಕೌತುಕವಿದೆ ಎಂದು ರಾಹುಲ್ ಮಾಂಮ್ರೆ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next