Advertisement

ಗೋವಾ ರಾಜ್ಯವನ್ನು ಸಂಪೂರ್ಣ ಲಸಿಕೆ ಪಡೆದ ರಾಜ್ಯ ಎಂದು ಘೋಷಿಸಲು ಸಹಕರಿಸಿ : ಗೋವಾ ಸಿಎಂ

07:53 PM Sep 10, 2021 | Team Udayavani |

ಪಣಜಿ: ಭಕ್ತಾದಿಗಳು ಗಣೇಶ ಚತುರ್ಥಿಯನ್ನು ಉತ್ಸಾಹದಿಂದ ಆಚರಿಸುವಾಗ ಕೋವಿಡ್ ನಿಯಮಗಳನ್ನು ಖಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

Advertisement

ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ತಮ್ಮ ಮೂಲ ಮನೆ ಗೋವಾದ ಪಾಳಿ-ಕೋಟಂಬಿಯಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಸುದ್ಧಿಗಾರರೊಂದಿಗೆ ಮಾತನಾಡಿದರು.

ಭಾರತ ದೇಶದೊಂದಿಗೆ ಇಡೀ ಜಗತ್ತು ಕರೋನಾದಿಂದ ಮುಕ್ತವಾಗಬೇಕು. ರಾಜ್ಯದಲ್ಲಿ ಕೋವಿಡ್ ಮೊದಲ ಲಸಿಕೆ ಪಡೆದುಕೊಳ್ಳುವಲ್ಲಿ ರಾಜ್ಯದ ಜನತೆ ಹೇಗೆ ಸಹಕರಿಸಿದ್ದೀರೋ ಹಾಗೆಯೇ ಎರಡನೇಯ ಡೋಸ್ ಲಸಿಕೆಯನ್ನೂ ಪಡೆದುಕೊಂಡು ಗೋವಾ ರಾಜ್ಯವನ್ನು ಸಂಪೂರ್ಣ ಲಸಿಕೆ ಪಡೆದ ರಾಜ್ಯ ಎಂದು ಘೋಷಿಸಲು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮನವಿ ಮಾಡಿದರು.

ಇದನ್ನೂ ಓದಿ : ಮುಂಬೈನಲ್ಲಿ ಮಹಿಳೆ ಮೇಲೆ ಅತ್ಯಾಚಾರ| ಸಂತ್ರಸ್ಥೆ ಮೇಲೆ ಕ್ರೌರ್ಯ ಮೆರೆದ ಕೀಚಕರು

Advertisement

Udayavani is now on Telegram. Click here to join our channel and stay updated with the latest news.

Next