Advertisement

ಗೋವಾ: ಮೊದಲ ದಿನವೇ ಅಧಿವೇಶನಕ್ಕೆ ತಟ್ಟಿದ ಪ್ರತಿಪಕ್ಷಗಳ ಪ್ರತಿಭಟನೆ

04:59 PM Oct 18, 2021 | Team Udayavani |

ಪಣಜಿ: ಕೇವಲ ಎರಡು ದಿನಗಳ ಅಧಿವೇಶನದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಲಭಿಸುತ್ತಿಲ್ಲ ಎಂದು ಆಕ್ಷೇಪಿಸಿ ಪ್ರತಿಪಕ್ಷಗಳು ಅಧಿವೇಶನದ ಮೊದಲ ದಿನ ಸೋಮವಾರ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.

Advertisement

ಇದರಿಂದಾಗಿ ಸಭಾಪತಿ ರಾಜೇಶ್ ಪಾಟ್ನೇಕರ್ ಮಧ್ಯಾಹ್ನ ಕೆಲ ಕಾಲ ಅಧಿವೇಶನ ಕಲಾಪವನ್ನು ಮುಂದೂಡಿದರು.

ಪ್ರಸಕ್ತ ಅಧಿವೇಶನವು ಸರ್ಕಾರದ ಕೊನೇಯ ಅಧಿವೇಶನವಾಗಿದ್ದು, ಕೇವಲ ಎರಡು ದಿನಗಳ ಕಾಲ ಅಧಿವೇಶನ ಆಯೋಜಿಸಿರುವುದರಿಂದ ಎಲ್ಲ ಪ್ರಶ್ನೆಗಳಿಗೆ ಉತ್ತರ ಲಭಿಸುವುದಿಲ್ಲ. ಇಷ್ಟೇ ಅಲ್ಲದೆಯೇ ಯಾವುದೇ ಚರ್ಚೆಗೆ ಅವಕಾಶ ಸಿಗುವುದಿಲ್ಲ. ಇದರಿಂದಾಗಿ ಅಧಿವೇಶನ ಕಾಲಾವಧಿಯನ್ನು ಹೆಚ್ಚಿಸಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next