Advertisement

ಹೊಸ ಪುಟ ಆರಂಭವಾಗಿದೆ, ಬಿಜೆಪಿಯಲ್ಲಿ ನಾಯಕರಿಗೆ ಕೊರತೆಯಿಲ್ಲ:ಗೋ ಮಧುಸೂದನ್

11:05 AM Jul 27, 2021 | keerthan |

ಬೆಂಗಳೂರು: ರಾಜ್ಯದಲ್ಲಿ ಹೊಸ ಪುಟ ಆರಂಭವಾಗಿದೆ, ಬಿಜೆಪಿಯಲ್ಲಿ ನಾಯಕರಿಗೆ ಕೊರತೆಯಿಲ್ಲ. ಹೊಸ ಸಿಎಂ ಬರ್ತಾರೆ. ಜೆ.ಪಿ.ನಡ್ಡಾ, ನರೇಂದ್ರ ಮೋದಿ, ಶಾ ಒಂದು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಗೋ ಮಧುಸೂದನ್ ಹೇಳಿದರು.

Advertisement

ಇಂದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ನಿನ್ನೆ ಭಾವುಕರಾಗಿ ಮಾತನಾಡಿದರು. ಬಿಜೆಪಿಗೆ ಅವರು ಸಲ್ಲಿಸಿದ ಗೌರವ. ಈ ಸಂದರ್ಭದಲ್ಲಿ ಸೌಜನ್ಯದ ಭೇಟಿ ಮಾಡಿದೆ. ನನ್ನ ಅವರ ಸಂಬಂಧ 40 ವರ್ಷದ್ದು. ಅವರು ಖುಷಿಯಿಂದಲೇ ಮಾತನಾಡಿದರು. ಅವರು ಉತ್ಸಾಹದಿಂದಲೇ ನಮ್ಮನ್ನು ಬರಮಾಡಿಕೊಂಡು ಮಾತನಾಡಿದರು. ಅವರ ರಾಜೀನಾಮೆ ಸ್ವರ್ಣ ಪುಟ ಸೇರಿದೆ ಎಂದರು.

ಇದನ್ನೂ ಓದಿ:ಯಡಿಯೂರಪ್ಪ ರಾಜೀನಾಮೆಯಿಂದ ಮನನೊಂದು ಬೊಮ್ಮಲಾಪುರದ ಯುವಕ ಆತ್ಮಹತ್ಯೆ

ಬಿಜೆಪಿಯಲ್ಲಿ 75 ವರ್ಷದ ಬಳಿಕ ಯಾರಿಗೂ ಅಧಿಕಾರ ನೀಡಿಲ್ಲ. ಅದನ್ನು ಯಡಿಯೂರಪ್ಪ ಸ್ಮರಿಸಿಕೊಂಡರು ಎಂದ ಅವರು, ಮುಂದಿನ ಸಿಎಂ ಬಗ್ಗೆ ಅನೇಕರ ಹೆಸರು ಕೇಳಿ ಬರ್ತಿದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next