Advertisement

ಕೋವಿಡ್ ನಿಯಂತ್ರಣಕ್ಕೆ ಪ್ರಥಮ ಆದ್ಯತೆ ನೀಡಿ

04:27 PM Apr 19, 2021 | Team Udayavani |

ರಾಮನಗರ: ಕೊರೊನಾ ನಿಯಂತ್ರಿಸುವ ಕೆಲಸಗಳಿಗೆ ತಾಲೂಕು ಆಡಳಿತಗಳು ಪ್ರಥಮ ಆದ್ಯತೆ ಕೊಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್‌ ಸೂಚಿಸಿದರು.

Advertisement

ನಗರದಲ್ಲಿನ ತಮ್ಮ ಕಚೇರಿಯಿಂದಲೇ ಜಿಲ್ಲೆಯ ಅಧಿಕಾರಿಗಳೊಂದಿಗೆ ನಡೆದ ವರ್ಚುಯಲ್‌ ಸಭೆ ಯಲ್ಲಿ ಮಾತನಾಡಿ, ಕೋವಿಡ್‌ ನಿಯಂತ್ರಣ ಕೆಲಸಗಳಿಗೆ ಬೇಕಾಗುವಷ್ಟು ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಿ, ಎಲ್ಲಾ ಕೆಲಸಗಳನ್ನು ಕ್ಷಿಪ್ರವಾಗಿ ನಡೆಸಿ ಎಂದು ತಿಳಿಸಿದರು.

ಸೋಂಕು ಪರೀಕ್ಷೆ ಹೆಚ್ಚು ನಡೆಸಿ: ತಾಲೂಕು ಮಟ್ಟ ದಲ್ಲಿ ಕೋವಿಡ್‌ ಸೋಂಕು ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಿ, ಸ್ವ್ಯಾಬ್ ಸಂಗ್ರಹಿಸಲು ಸಿಬ್ಬಂದಿ ಕೊರತೆ ಇದ್ದಲ್ಲಿ ನಿಯಮಾವಳಿಗಳಂತೆ ನಿಯೋಜಿಸಿಕೊಳ್ಳಿ, ಮೊಬೈಲ್‌ ಪರೀಕ್ಷಾ ವಾಹನದ ವ್ಯವಸ್ಥೆ ಮಾಡಿಕೊಳ್ಳಿ. ಅನುದಾನದ ಕೊರತೆ ಉಂಟಾಗದಂತೆ ಈಗಾಗಲೇ ಪ್ರತಿ ತಾಲೂಕಿಗೆ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಸಹಕರಿಸದಿದ್ದರೆ ನೋಟಿಸ್‌: ಖಾಸಗಿ ಆಸ್ಪತ್ರೆಗಳು ವೈದ್ಯರಿಗೆ ಸೂಚನೆ ನೀಡಿ ಐಎಲ್‌ಐ ಹಾಗೂ ಎಸ್‌ ಎಆರ್‌ಐ ಲಕ್ಷಣಗಳು ಉಳ್ಳ ರೋಗಿಗಳ ಪಟ್ಟಿ ಪಡೆದು ಪರೀಕ್ಷೆಗೆ ಒಳಪಡಿಸಿ. ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಸಹಕರಿಸದಿದ್ದರೆ ನೋಟಿಸ್‌ ಜಾರಿ ಮಾಡಿ ಎಂದು ತಾಕೀತು ಮಾಡಿದರು.

ಪ್ರಥಮ ಸಂಪರ್ಕಿತರ ಪತ್ತೆಗೆ ಕ್ರಮ: ಕೋವಿಡ್‌ ಸೋಂಕು ಪರೀಕ್ಷೆಯ ನಂತರ ವರದಿಯನ್ನು ಶೀಘ್ರವಾಗಿ ನೀಡಬೇಕಾಗಿದೆ ಎಂದ ಅವರು, ಈ ವಿಚಾರ ದಲ್ಲಿ ಕೆಲವು ಸಲಹೆ ನೀಡಿದರು. ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಟ್ರೇಸಿಂಗ್‌ ತಂಡಗಳನ್ನು ವಾರ್ಡ್‌/ ಗ್ರಾಮವಾರು ನಿಯೋಜಿಸಿಕೊಂಡು ಕೋವಿಡ್‌ ಸೋಂಕಿತರ ಸಂಪರ್ಕಿತರ ಪತ್ತೆ ಕೆಲಸ ಚುರುಕುಗೊಳಿಸಿ ಎಂದ ಅವರು, ಕೋವಿಡ್‌ ವಾರ್‌ ರೂಂನಲ್ಲಿ ಕ್ರಮಬದ್ಧವಾಗಿ ಕೆಲಸಗಳು ನಡೆಯಲಿ ಎಂದರು. ಆರೋಗ್ಯ ಸಿಬ್ಬಂದಿ, ಫ್ರಂಟ್‌ ಲೈನ್‌ ವರ್ಕ ರ್‌ಗಳು 2ನೇ ಡೋಸ್‌ ಕೋವಿಡ್‌ ಲಸಿಕೆ ಪಡೆಯಲು ಕ್ರಮವಹಿಸಿ ಎಂದರು. ಸಭೆಯಲ್ಲಿ ಜಿಪಂ ಸಿಇಒ ಇಕ್ರಂ, ಜಿÇÉಾ ಆರೋಗ್ಯಾಧಿಕಾರಿ ಡಾ.ನಿರಂಜನ್‌, ಆರ್‌ಸಿಎಚ್‌ ಅಧಿಕಾರಿ ಡಾ.ಪದ್ಮಾ, ಡಿಎಸ್‌ಒ ಡಾ. ಕಿರಣ್‌ಶಂಕರ್‌, ತಹಶೀಲ್ದಾರರು, ಇಒ, ಇನ್ನಿತರ ಅಧಿ ಕಾರಿಗಳು ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next