Advertisement

ಲೈಂಗಿಕ ಕಿರುಕುಳ ಬಹಿರಂಗ;ಅಪ್ರಾಪ್ತ ವಯಸ್ಕಳಿಗೆ ಬೆಂಕಿ ಹಚ್ಚಿ ಕೊಲೆ!

03:15 PM Dec 03, 2018 | Team Udayavani |

ವಿಜಯಪುರ: ಬೆಚ್ಚಿ ಬೀಳುವ ಅಂತ್ಯಂತ ಕ್ರೂರ ಘಟನೆಯೊಂದರಲ್ಲಿ ಲೈಂಗಿಕ ಕಿರುಕುಳ ನೀಡಿದ್ದನ್ನು ಬಹಿರಂಗ ಪಡಿಸಿದ್ದಕ್ಕಾಗಿ ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳನ್ನು ಬೆಂಕಿ ಹಚ್ಚಿ ಕೊಂದ ಘಟನೆ ನಡೆದಿದೆ. 

Advertisement

ರತ್ನಾಪುರ ಗ್ರಾಮ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ  ರಾಕ್ಷಸೀ ಕೃತ್ಯ ನಡೆದಿದ್ದು, ವಿವಾಹಿತ ಮತ್ತು ಇನ್ನೋರ್ವ ಯುವಕ  14 ರ ಹರೆಯದ ಬಾಲಕಿಗೆ ನಿರಂತರವಾಗಿ ಕಿರುಕುಳ ನೀಡಿದ್ದರು, ಮಾತ್ರವಲ್ಲದೆ ಬಹಿರಂಗ ಪಡಿಸದಂತೆ ಬೆದರಿಕೆಯನ್ನೂ ಹಾಕಿದ್ದರು. 

ಬಾಲಕಿ ಪೋಷಕರ ಬಳಿಕ ತನಗೆ ನಿರಂತರ 2 ತಿಂಗಳಿನಿಂದ  ನೀಡುತ್ತಿರುವ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದು,  ಆ ಬಳಿಕ ಆಕ್ರೋಶಗೊಂಡ ಇಬ್ಬರು ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. 

ಶಂಕರ ಹಿಪ್ಪರಕರ (24)  ಮತ್ತು ಮೋಹನ್‌ ಎಡವೆ (19)ಎನ್ನುವರು ಕೃತ್ಯ ಎಸಗಿರುವ ಆರೋಪಿಗಳಾಗಿದ್ದು  ಇಬ್ಬರನ್ನೂ ಪೊಲೀಸರು ಬಂಧಿಸುವಲ್ಲಿ  ಯಶಸ್ವಿಯಾಗಿದ್ದಾರೆ.  ಶಂಕರ ವಿವಾಹಿತನಾಗಿದ್ದಾನೆ. 

ತಿಕೋಟಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರಿದಿದೆ. ಬಾಲಕಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ನಮ್ಮ ಮಗಳಿಗಾದ ರೀತಿಯಲ್ಲೇ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next