Advertisement

ವಿದ್ಯಾರ್ಥಿನಿ ಅನಮಾನಸ್ಪದ ಸಾವು: ಸಮಗ್ರ ತನಿಖೆ ನಡೆಸಿನ್ಯಾಯ ಒದಗಿಸಲು ಆಗ್ರಹ

10:08 PM Jun 10, 2023 | Team Udayavani |

ಉಡುಪಿ: ಕುಂದಾಪುರ ವಿದ್ಯಾಸಂಸ್ಥೆಯೊಂದರ ವಸತಿ ನಿಲಯದ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ವಿದ್ಯಾರ್ಥಿನಿ ತನ್ವಿ ಸಾವಿನ ಪ್ರಕರಣ ಅನುಮಾನಸ್ಪದವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಲು ಪೋಷಕರು ಪೊಲೀಸ್‌ ಇಲಾಖೆಯನ್ನು ಆಗ್ರಹಿಸಿದ್ದಾರೆ.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮೃತ ವಿದ್ಯಾರ್ಥಿನಿ ತಂದೆ ರೋಶನ್‌ ನಾರಾಯಣ ಪಾಲೆಕರ್‌ ಮಾತನಾಡಿ, ತನ್ವಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, 8ನೇ ತರಗತಿಯವರೆಗೆ ಕಾರವಾರದ ಸೈಂಟ್‌ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಮುಗಿಸಿ 9ನೇ ತರಗತಿಗೆ ಕುಂದಾಪುರ ವಿದ್ಯಾಸಂಸ್ಥೆಗೆ ಸೇರಿಸಲಾಗಿತ್ತು. ಧೈರ್ಯವಂತೆ ಆಗಿದ್ದ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿ ಹೊಂದಿರಲಿಲ್ಲ. ಪೊಲೀಸರು ಈ ಬಗ್ಗೆ ವ್ಯವಸ್ಥಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ವಿನಂತಿಸಿದರು.
ಕಾರವಾರ ಮೂಲದ ಕಾಜುಬಾರು ನಿವಾಸಿಯಾಗಿರುವ ತನ್ವಿ ಈ ವರ್ಷ ಇಲ್ಲಿ ಪ್ರವೇಶ ಪಡೆದಿದ್ದಳು. ಮನೆಯಿಂದ ಹೊರಡುವಾಗಲೂ ಖುಷಿಯಿಂದ ಹೊರಟಿದ್ದಳು. ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಮೇಲೆ ನಮಗೆ ಅನುಮಾನವಿಲ್ಲ. ಆದರೆ ಈ ಸಾವು ಅನುಮಾನದಿಂದ ಕೂಡಿದೆ ಎಂದು ತಂದೆ ರೋಶನ್‌ ತಿಳಿಸಿದರು.

ಕಾರವಾರ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ರಾಘು ನಾಯ್ಕ ಮಾತನಾಡಿ, ಆತ್ಮಹತ್ಯೆಗೆ ಶರಣಾಗುವಷ್ಟು ನೋವಿನಲ್ಲಿ ಆಕೆ ಇರಲಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಈ ಸಾವಿನಲ್ಲಿ ಅನುಮಾನವಿದ್ದು, ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಮೃತ ತನ್ವಿ ಅವರ ತಾಯಿ ರಂಜನಾ ರೋಶನ್‌ ಪಾಲೆಕರ್‌, ಜ್ಯೋತಿ, ಈಶ್ವರ ನಾಯ್ಕ, ದತ್ತರಾಮ, ಪ್ರಕಾಶ್‌ ಕಾಮತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next