Advertisement

ಘೋಡ್‌ಬಂದರ್‌ ರೋಡ್‌ ಕನ್ನಡ ಅಸೋಸಿಯೇಶನ್‌:ವಿಹಾರ ಕೂಟ

04:50 PM Aug 30, 2017 | Team Udayavani |

ಮುಂಬಯಿ: ಘೋಡ್‌ಬಂದರ್‌ ರೋಡ್‌ ಕನ್ನಡ ಅಸೋಸಿಯೇಶನ್‌ ವತಿಯಿಂದ  ಸಂಘದ ಸದಸ್ಯ ಬಾಂಧವರೆಲ್ಲರೂ ಒಂದಾಗಿ ಇತ್ತೀಚೆಗೆ ಅಂಬರ್‌ನಾಥ್‌ನ ಆನಂದ್‌ ರಿಸಾರ್ಟ್‌ನಲ್ಲಿ ವಿಹಾರ ಕೂಟ ಆಯೋಜಿಸಿ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕಾಲ ಕಳೆದರು.

Advertisement

ಘೋಡ್‌ಬಂದರ್‌ರೋಡ್‌ ಕನ್ನಡ ಅಸೋಸಿಯೇಶನ್‌ನ ಅಧ್ಯಕ್ಷರಾದ ವಿಕ್ರಮಾನಂದ ಶೆಟ್ಟಿ ಅವರ ಸಾರಥ್ಯದಲ್ಲಿ ಆಯೋಜಿಸಲಾದ ವಿಹಾರ ಕೂಟದಲ್ಲಿ ಸಂಘದ  ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯರು ತಮ್ಮ ಪರಿವಾರ ಸಮೇತರಾಗಿ  ವಿಹಾರ ಕೂಟದಲ್ಲಿ ಭಾಗವಹಿಸಿದರು.

ಥಾಣೆಯ ಘೋಡ್‌ಬಂದರ್‌ನಿಂದ ಎರಡು ಬಸ್ಸುಗಳ ಮೂಲಕ ಆನಂದ್‌ ರಿಸಾರ್ಟ್‌ಗೆ ತೆರಳಿದ ಸದಸ್ಯರು ಎಡೆಬಿಡದೆ ಸುರಿಯುವ ಮಳೆಯನ್ನು ಲೆಕ್ಕಿಸದೆ ವಿಹಾರ ಕೂಟದ ಸಂಪೂರ್ಣ ಆನಂದವನ್ನು ಪಡೆದು ಸಂಭ್ರಮಿಸಿದರು.

ಸದಸ್ಯರಿಗೆಲ್ಲ ಅವರವರ ವಯೋಮಿತಿಗೆ ಅನುಗುಣವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಸ್ಥಳದಲ್ಲೇ ಬಹುಮಾನ ನೀಡಿ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next