Advertisement

Udupi: ಜೀನ್‌ ಚಿಕಿತ್ಸೆ, ನಿಖರ ಔಷಧ ಸಮ್ಮೇಳನ: ಡಾ| ಕೃಷ್ಣಪ್ರಸಾದ್‌ ಕೂಡ್ಲು ಅವರಿಗೆ ಸಮ್ಮಾನ

01:24 AM Sep 27, 2024 | Team Udayavani |

ಉಡುಪಿ: ಜೆನೆಟಿಕ್ಸ್‌ ಆ್ಯಂಡ್‌ ಜೀನ್‌ ಥೆರಪಿ ಸಂಸ್ಥೆ ಹಾಗೂ ಬೆಂಗಳೂರಿನ ನಾರಾಯಣ ನೇತ್ರಾಲಯ ಫೌಂಡೇಶನ್‌ ಆಶ್ರಯ ದಲ್ಲಿ ಆನುವಂಶಿಕ ಅಸ್ವಸ್ಥತೆ, ರೋಗ ನಿರ್ಣಯ ಹಾಗೂ ನಿಖರವಾದ ಔಷಧ ಪ್ರಯೋಗ ವಿಷಯಗಳ ಬಗ್ಗೆ ರಾಷ್ಟ್ರೀಯ ಮಟ್ಟದ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಿತು.

Advertisement

ಈ ಸಂದರ್ಭದಲ್ಲಿ ನೇತ್ರ ಚಿಕಿತ್ಸಾ ಸಂಶೋಧನೆಯಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಸಮ್ಮೇ ಳನದಲ್ಲಿ ಆಹ್ವಾನಿತ ಅತಿಥಿಯಾಗಿ ಭಾಗವಹಿಸಿದ ಪ್ರಸಾದ್‌ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್‌ ಕೂಡ್ಲು ಅವರನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಡಾ| ಡಿ. ವೈ. ಚಂದ್ರಚೂಡ್‌ ಗೌರವಿಸಿದರು.

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌, ಕೂಡ್ಲಿಗಿ ಶಾಸಕ ಡಾ| ಶ್ರೀನಿವಾಸ್‌ ಎನ್‌. ಟಿ., ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ನಾರಾಯಣ ನೇತ್ರಾಲಯದ ಚೇರ್ಮನ್‌ ಡಾ| ರೋಹಿತ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next