Advertisement

ಅಲ್ವಾರ್ ಗುಂಪು ಥಳಿತ ಕೇಸ್; ಮೃತ ಪೆಹ್ಲೂ ಖಾನ್ ಮತ್ತು ಮಕ್ಕಳ ವಿರುದ್ಧ ಚಾರ್ಜ್ ಶೀಟ್

09:48 AM Jul 01, 2019 | Nagendra Trasi |

ರಾಜಸ್ಥಾನ: 2017ರಲ್ಲಿ ರಾಜಸ್ಥಾನದ ಅಲ್ವಾರ್ ನಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ವೇಳೆ ಗೋರಕ್ಷಕರ ಗುಂಪು ಥಳಿತದಲ್ಲಿ ಸಾವನ್ನಪ್ಪಿದ್ದ ಪೆಹ್ಲೂ ಖಾನ್ ಹಾಗೂ ಆತನ ಇಬ್ಬರು ಮಕ್ಕಳ ವಿರುದ್ಧ ರಾಜಸ್ಥಾನ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದಾರೆ.

Advertisement

ಖಾನ್ ಪುತ್ರರಾದ ಇರ್ಷಾದ್(25ವರ್ಷ) ಮತ್ತು ಅರಿಫ್ (22ವರ್ಷ) ವಿರುದ್ಧ ಸೆಕ್ಷನ್ಸ್ 5,8 ಹಾಗೂ 9ರ ಅನ್ವಯ ಚಾರ್ಜ್ ಶೀಟ್ ದಾಖಲಿಸಿದ್ದರು, ಮೃತ ಪೆಹ್ಲೂ ಖಾನ್ ವಿರುದ್ಧ ರಾಜಸ್ಥಾನ್ ಗೋ ಹತ್ಯೆ ನಿಷೇಧ ಮತ್ತು ಸಾಗಾಟ ನಿಷೇಧ ಕಾಯ್ದೆ 1995ರ ಸೆಕ್ಷನ್ 9ರ ಪ್ರಕಾರ ದೋಷಾರೋಪ ಹೊರಿಸಲಾಗಿದೆ.

ಪೆಹ್ಲೂ ಖಾನ್ ವಿರುದ್ಧ ಕಳೆದ ವರ್ಷದ ಡಿಸೆಂಬರ್ 13ರಂದು ಚಾರ್ಜ್ ಶೀಟ್ ಸಿದ್ದಪಡಿಸಲಾಗಿತ್ತು. ಬಳಿಕ ರಾಜಸ್ಥಾನದಲ್ಲಿ ಕಾಂಗ್ರೆಸ್ ನ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಅಧಿಕಾರಕ್ಕೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next