Advertisement

ಸಾಕ್ಷ್ಯನಾಶಕ್ಕೆ ಕೇಜ್ರಿವಾಲ್‌, ಸತ್ಯೇಂದ್ರ ಜೈನ್‌ ಒತ್ತಾಯ: ಸುಕೇಶ್‌ ಚಂದ್ರಶೇಖರ್‌

09:19 PM Jan 13, 2023 | Team Udayavani |

ನವದೆಹಲಿ :ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಆಪ್‌ ಸಚಿವ ಸತ್ಯೇಂದ್ರ ಜೈನ್‌ ಹಾಗೂ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಈ ಪ್ರಕರಣ ಸಂಬಂಧಿಸಿದ ಸಾಕ್ಷ್ಯವನ್ನು ನಾಶ ಪಡಿಸುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ, ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ವಿನಯ್‌ ಕುಮಾರ್‌ ಸಕ್ಸೆನಾ ಅವರಿಗೆ ಸುಕೇಶ್‌ ಚಂದ್ರಶೇಖರ್‌ ಪತ್ರ ಬರೆದಿದ್ದಾನೆ.

Advertisement

ವಂಚನೆ ಪ್ರಕರಣದ ಹಿನ್ನೆಲೆ ತಿಹಾರ್‌ ಜೈಲಿನಲ್ಲಿರುವ ಸುಕೇಶ್‌ ಚಂದ್ರಶೇಖರ್‌, ಸಚಿವ ಸತ್ಯೇಂದ್ರ ಜೈನ್‌ ಅಕ್ರಮ ಹಣವರ್ಗಾವಣೆ ನಡೆಸಿದ್ದಾರೆ.

ಸಚಿವ ಜೈನ್‌ ಮತ್ತು ದೆಹಲಿ ಸಿಎಂ ಅಧಿಕಾರಿಗಳ ಮೂಲಕ ತನ್ನನ್ನು ಹಿಂಸಿಸುತ್ತಿದ್ದು, 48 ಗಂಟೆ ಒಳಗೆ ಸಾಕ್ಷಿ ನಾಶಪಡಿಸುವಂತೆ ಬೆದರಿಕೆ ಹಾಕಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next