Advertisement

ಇದು ಅತ್ಯಂತ ಕೆಟ್ಟ ಅಂಪೈರಿಂಗ್: ಸಿಟ್ಟಾದ ಗೌತಮ್ ಗಂಭೀರ್, ಗ್ರೇಮ್ ಸ್ವಾನ್

09:43 AM Oct 02, 2021 | Team Udayavani |

ದುಬೈ: ಐಪಿಎಲ್ ಕೂಟ ದಿನಕ್ಕೊಂದು ರೋಚಕತೆ ಪಡೆಯುತ್ತಿದೆ. ಪ್ರತಿ ಪಂದ್ಯವೂ ರೋಮಾಂಚನಕಾರಿ ತಿರುವು ಪಡೆಯುತ್ತಿದೆ. ಶುಕ್ರವಾರ ನಡೆದ ಕೆಕೆಆರ್ ಮತ್ತು ಪಂಜಾಬ್ ನಡುವೆ ನಡೆದ ಪಂದ್ಯವೂ ಇಂತಹ ಘಟನೆಗಳಿಗೆ ಸಾಕ್ಷಿಯಾಗಿದೆ.

Advertisement

ಈ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಹಿಡಿದ ಕ್ಯಾಚ್ ಇದೀಗ ಚರ್ಚೆಯ ವಿಷಯವಾಗಿದೆ. ಪಂಜಾಬ್ ಗೆಲುವಿಗೆ 9 ಎಸೆತದಲ್ಲಿ 11 ರನ್ ಅವಶ್ಯಕತೆಯಿತ್ತು. ಈ ವೇಳೆ ಪಂಜಾಬ್ ನಾಯಕ ಕೆ.ಎಲ್ ರಾಹುಲ್ ಚೆಂಡನ್ನು ಮಿಡ್ ವಿಕೆಟ್ ಕಡೆಗೆ ಬಾರಿಸಿದರು. ಫೀಲ್ಡರ್ ರಾಹುಲ್ ತ್ರಿಪಾಠಿ ಓಡಿ ಬಂದು ಡೈವ್ ಹಾಕಿ ಚೆಂಡನ್ನು ಹಿಡಿದು ಸಂಭ್ರಮಿಸಿದರು.

ಇದನ್ನೂ ಓದಿ:ಫುಟ್‌ಬಾಲ್‌ ದಿಗ್ಗಜ ಮೆಸ್ಸಿ ಹೋಟೆಲ್‌ ಕೊಠಡಿಗೇ ಕನ್ನ!

ಆದರೆ ಕ್ಯಾಚ್ ಪರಿಶೀಲಿಸಿದ ಥರ್ಡ್ ಅಂಪೈರ್, ಚೆಂಡು ನೆಲ ಸ್ಪರ್ಷಿಸಿದೆ ಎಂದು ನಾಟೌಟ್ ಎಂದು ತೀರ್ಪಿತ್ತರು. ನಂತರ ಪಂಜಾಬ್ ಗೆಲುವು ಸಾಧಿಸಿತು.

Advertisement

ಆದರೆ ಈ ತೀರ್ಪಿನ ವಿರುದ್ಧ ಗೌತಮ್ ಗಂಭೀರ್ ಮತ್ತು ಗ್ರೇಮ್ ಸ್ವಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ ಇದು ನಾನು ನೋಡಿದ ಅತ್ಯಂತ ಕೆಟ್ಟ ಅಂಪೈರಿಂಗ್ ನಿರ್ಧಾರ’ ಎಂದು ಗ್ರೇಮ್ ಸ್ವಾನ್ ಹೇಳಿದ್ದಾರೆ.

ಅವರು ರಿಪ್ಲೇ ಒಂದು ಬಾರಿಗಿಂತ ಹೆಚ್ಚು ನೋಡಿಲ್ಲ. ಒಂದು ವೇಳೆ ಕೆ ಎಲ್ ರಾಹುಲ್ ಔಟಾಗಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು. ಇಂತಹ ಘಟನೆಗಳು ಐಪಿಎಲ್ ನಲ್ಲಿ ಮರುಕಳಿಸಬಾರದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next