Advertisement

Wild Animal: ಹೃದಯ ಭಾಗಕ್ಕೆ ತಿವಿದ ಕಾಡುಕೋಣ: ವೃದ್ಧನ ಸ್ಥಿತಿ ಗಂಭೀರ

01:07 PM Aug 26, 2023 | Team Udayavani |

ಚಿಕ್ಕಮಗಳೂರು: ಕಾಡುಕೋಣವೊಂದು ಹೃದಯ ಭಾಗಕ್ಕೆ ಬಲವಾಗಿ ತಿವಿದು ವೃದ್ಧನೊರ್ವ ಗಂಭೀರ ಗಾಯಗೊಂಡ ಘಟನೆ ಕಳಸ ತಾಲೂಕಿನ ಮುಜೇಖಾನ್ ಗ್ರಾಮದಲ್ಲಿ ನಡೆದಿದೆ.

Advertisement

ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಮರೀಗೌಡ (60) ಎನ್ನಲಾಗಿದೆ. ಇವರು ಕಾಡಂಚಿನ ಗ್ರಾಮ ಮುಜೇಖಾನ್ ನಿಂದ ಕಳಸ ಕಡೆಗೆ ಬರುವಾಗ ಕಾಡುಕೋಣ ದಾಳಿ ಮಾಡಿದೆ.

ಗಂಭೀರ ಗಾಯಗೊಂಡ ಮರೀಗೌಡ ಅವರನ್ನು ಕಳಸ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಳಸ ತಾಲೂಕಿನಲ್ಲಿ ಆಗಾಗ್ಗೆ ಕಾಡುಕೋಣ ದಾಳಿ ನಡೆಯುತ್ತಲೇ ಇರುತ್ತಿದ್ದು, ಕಾಡುಪ್ರಾಣಿಗಳ ದಾಳಿಗೆ ಕಂಚಿನಕೆರೆ, ಮುಂಡಾನಿ, ಕಾಳಿಕೆರೆ, ಕೊಂಡದಮನೆ, ಗೊಡ್ಲುಮನೆ ಗ್ರಾಮಗಳ ಜನ ಕಂಗೆಟ್ಟಿದ್ದಾರೆ.

ಇದನ್ನೂ ಓದಿ: Thirthahalli: ಜಾಗ ಒತ್ತುವರಿ ಮಾಡಿಕೊಂಡವರನ್ನು ಮುಲಾಜಿಲ್ಲದೆ ತೆರವುಗೊಳಿಸಿ: ಶಾಸಕ ಆರಗ

Advertisement
Advertisement

Udayavani is now on Telegram. Click here to join our channel and stay updated with the latest news.

Next