Advertisement

ಗ್ಯಾಸ್‌ ಸ್ಫೋಟ: 13 ಜನಕ್ಕೆ ಗಾಯ

01:20 PM Mar 04, 2023 | Team Udayavani |

ಬೆಂಗಳೂರು: ರಾಜಾಜಿನಗರದ ಮರಿಯಪ್ಪನಪಾಳ್ಯದಲ್ಲಿ ಅನಿಲ ಸೋರಿಕೆಯಿಂದ ಉಂಟಾದ ಸ್ಫೋಟದಿಂದ 13 ಮಂದಿ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.

Advertisement

ಅಜ್ಮಲ್‌ (46), ನಜೀಮ್‌ (42), ರಿಯಾನ್‌ (14), ಅದ್ನಾನ್‌ (12), ಫ‌ಯಾಜ್‌ (10), ಮೆಹರುನ್ನಿಸಾ (11), ಅಜಾನ್‌ (5) , ಜೈನಬ್‌ (8) ಅರ್ಮೀ ಜಾನ್‌ (52), ಶಬನಾಜ್‌ (18), ನಸೀಮಾ, (40), ಸಲ್ಮಾ (33) ಹಾಗೂ ರೇಷ್ಮಾ ಬಾನು (48) ಗಾಯಗೊಂಡವರು. 13 ಮಂದಿಯೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಜ್ಮಲ್‌ ಮನೆಯಲ್ಲಿ ಕಾರ್ಯಕ್ರಮವಿತ್ತು. ಹೀಗಾಗಿ ಗುರುವಾರ ರಾತ್ರಿ ಅಡುಗೆ ಮಾಡಲಾಗಿತ್ತು. ಈ ವೇಳೆ ಸಿಲಿಂಡರ್‌ ಆಫ್ ಮಾಡುವುದನ್ನು ಮರೆತಿದ್ದರು. ಪರಿಣಾಮ ಗ್ಯಾಸ್‌ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿತ್ತು. ಕುಟುಂಬದ ಸದಸ್ಯರು ಶುಕ್ರವಾರ ಬೆಳಿಗ್ಗೆ ಅಡುಗೆ ಮಾಡುವ ಉದ್ದೇಶದಿಂದ ಸ್ಟೌವ್‌ ಹಚ್ಚಲು ಮುಂದಾಗಿದ್ದರು. ಆ ವೇಳೆ ಏಕಾಏಕಿ ಸ್ಫೋಟ ಉಂಟಾಗಿದೆ. ಪರಿಣಾಮ ಕಟ್ಟಡದ ಗೋಡೆ, ಮೆಟ್ಟಿಲುಗಳು ಬಿರುಕು ಬಿಟ್ಟಿತ್ತು.

ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ದೌಡಾಯಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next