Advertisement

ಪಜೀರು: ಗ್ಯಾಸ್‌ ಸಿಲಿಂಡರ್‌ ಲಾರಿ ಪಲ್ಟಿ

02:26 AM May 07, 2019 | Team Udayavani |

ಉಳ್ಳಾಲ: ಗ್ಯಾಸ್‌ ಸಿಲಿಂಡರ್‌ ಹೇರಿಕೊಂಡು ಇಳಿಜಾರಿನಲ್ಲಿ ಸಂಚರಿಸುತ್ತಿದ್ದ ಲಾರಿಯೊಂದು ಸೋಮವಾರ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಗಾಯಗೊಂಡಿ ರುವ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾಸ್‌ ಸಿಲಿಂಡರ್‌ ಸೋರಿಕೆಯಾಗದ ಕಾರಣ ದೊಡ್ಡ ಅವಘಡ ಸಂಭವಿಸಿಲ್ಲ.

Advertisement

ಪಜೀರಿನ ಅರ್ಕಾಣದ ಬಳಿಯ ಪಯಾಝ್ ಅವರಿಗೆ ಸೇರಿದ ಎಚ್‌ಪಿ ಎಲ್‌ಪಿಜಿ ಗೋದಾಮಿನ ಬಳಿ ಅಪಘಾತ ಸಂಭವಿಸಿದೆ. ಲಾರಿಯನ್ನು ಗೋದಾಮಿನಿಂದ ಕೊಂಡೊಯ್ಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಗೋದಾಮಿನ ಆವರಣ ಗೋಡೆಗೆ ಢಿಕ್ಕಿ ಹೊಡೆದು ಬಳಿಕ ಕಂದಕಕ್ಕೆ ಉರುಳಿದೆ.ಮರವೊಂದು ಅಡ್ಡ ಸಿಕ್ಕಿದ ಪರಿಣಾಮ ಲಾರಿ ಪಲ್ಟಿಯಾಗುವುದು ತಪ್ಪಿದೆ.

ಒಂದೊಮ್ಮೆ ಗ್ಯಾಸ್‌ ಸೋರಿಕೆಯಾಗಿದ್ದರೆ ಸಿಲಿಂಡರ್‌ಗಳು ಸ್ಫೋಟಿಸಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಅವಘಡ ಸಂಭವಿಸಿದ ಜಾಗದಲ್ಲಿ ಹಲವಾರು ಮನೆಗಳಿದ್ದು, ಮನೆಮಂದಿ ಬೆಳಗ್ಗಿನಿಂದಲೇ ಆತಂಕಗೊಂಡಿದ್ದರು.
ಅಪ ಘಾತ ನಡೆದ ಕೂಡ ಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಕೂಡಲೇ ಅಗ್ನಿಶಾಮಕ ದಳ ಸಿಬಂದಿ ಸ್ಥಳಕ್ಕೆ ಆಗಮಿಸಿ ಗ್ಯಾಸ್‌ ಸೋರಿಕೆ ಬಗ್ಗೆ ಪರಿಶೀಲಿಸಿದ್ದರು. ಬಳಿಕ ಗ್ಯಾಸ್‌ ಸಿಲಿಂಡರ್‌ಗಳನ್ನು ಕೆಳಗಿಳಿಸಿ ಲಾರಿಯನ್ನು ಕ್ರೇನ್‌ ಮೂಲಕ ಮೇಲಕ್ಕೆತ್ತಲಾಯಿತು.

ಅಗ್ನಿಶಾಮಕ ವಾಹನಕ್ಕೆ ಸ್ಕೂಟರ್‌ ಢಿಕ್ಕಿ
ಅರ್ಕಾಣ ಪ್ರದೇಶದಲ್ಲಿಗ್ಯಾಸ್‌ ಸಿಲಿಂಡರ್‌ ಲಾರಿ ಉರುಳಿ ಬಿದ್ದ ಸ್ಥಳಕ್ಕೆ ಕೂಡಲೇ ಎರಡು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದವು. ಈ ವೇಳೆ ಒಂದು ವಾಹನಕ್ಕೆ ಅಸೈಗೋಳಿಯ ಗಣೇಶ್‌ ಮಹಲ್‌ ಬಳಿ ಸ್ಕೂಟರ್‌ ಢಿಕ್ಕಿ ಹೊಡೆದಿದ್ದು, ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next