Advertisement

ಕಸ ಸಂಗ್ರಹಿಸುವ ವಾಹನಕ್ಕೆ ಚಾಲನೆ

06:10 PM May 08, 2020 | Suhan S |

ಹುಣಸೂರು: ಸ್ವಚ್ಛ ಭಾರತ್‌ ಮಿಷನ್‌ ಅಭಿಯಾನದಡಿ ನಗರಸಭೆಗೆ ಮನೆ ಮನೆ ಕಸ ಸಂಗ್ರಹಿಸುವ 10 ಆಟೋ, ಟಿಪ್ಪರ್‌ಗಳಿಗೆ ಗುರುವಾರ ಶಾಸಕ ಎಚ್‌.ಪಿ. ಮಂಜುನಾಥ್‌ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

Advertisement

ನಂತರ ಮಾತನಾಡಿ, ಸ್ವಚ್ಛಭಾರತ್‌ ಯೋಜನೆಯಡಿ 3 ಕೋಟಿ ಅನುದಾನ ಬೇಡಿಕೆ ಸಲ್ಲಿಸಲಾಗಿದ್ದು, 1.86 ಕೋಟಿ ಅನುದಾನ ಬಂದಿದೆ. ಸ್ವತ್ಛ ಭಾರತ್‌ ಯೋಜನೆಯಡಿ 18.65 ಲಕ್ಷ, ರಾಜ್ಯ ಸರ್ಕಾರ 12.43 ಲಕ್ಷ, ನಗರಸಭೆಯ 22.25 ಲಕ್ಷ ಸೇರಿದಂತೆ ಒಟ್ಟು 53,33 ಲಕ್ಷ ರೂ. ವೆಚ್ಚದಡಿ ಸರ್ಕಾರದ ಇ-ಮಾರ್ಕೆಟ್‌ ಮೂಲಕ ಮಾರುಕಟ್ಟೆ ದರಕ್ಕಿಂತ ಶೇ.10ರಷ್ಟು ಕಡಿಮೆ ದರದಲ್ಲಿ ಆಟೋಗಳನ್ನು ಖರೀದಿಸಲಾಗಿದೆ ಎಂದರು. ಪರಿಸರ ಎಂಜಿನಿಯರ್‌ ರೂಪಾ ಮಾತನಾಡಿ, ಹಸಿ, ಒಣ ಕಸ ಬೇರ್ಪಡಿಸಲು ಮನೆಗೆ ಎರಡರಂತೆ 12,971 ಜೊತೆ ಕೆಂಪು, ಹಸಿರು ಬಣ್ಣದ ಡಬ್ಬಿಗಳನ್ನು ವಿತರಿಸಲಾಗುವುದು. ನಗರದಿಂದ ದೂರದಲ್ಲಿರುವ ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ ಘಟಕದ ಮೂಲಕ ನಗರದ ಕಸವನ್ನು ವಿಂಗಡಿಸಿ,  ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಇದಕ್ಕೆ ಬೇಡಿಕೆ ಇದ್ದು, ನಗರಸಭೆಗೆ ತಿಂಗಳಿಗೆ 15 ಸಾವಿರ ರೂ. ಆದಾಯ ಬರುತ್ತಿದೆ ಎಂದರು.

ನೀರಿನ ಸಮಸ್ಯೆ ಪರಿಹರಿಸಲಾಗುವುದು. ಮನೆ, ವಾಣಿಜ್ಯ ಸಂಕೀರ್ಣ, ನೀರಿನ ತೆರಿಗೆಯನ್ನು ಮೇ ಅಂತ್ಯದೊಳಗೆ ಪಾವತಿಸಿದಲ್ಲಿ ಶೇ.5ರಷ್ಟು ವಿನಾಯಿತಿ ಸಿಗಲಿದೆ ಎಂದು ಪೌರಾಯುಕ್ತ ಮಂಜುನಾಥ್‌ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮನು, ಮಾಲಿಕ್‌, ಸತೀಶ್‌ಕುಮಾರ್‌, ಕೋಳಿಮಂಜು, ಮುಖಂಡರಾದ ಪೆರುಮಾಳ್‌, ರಾಘು, ಲಕ್ಷ್ಮಣ್‌, ಕಣ್ಣಯ್ಯ, ಆರ್‌.ಐ.ಜಯಶೀಲ ಮೊದಲಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next