ಮಂಗಳೂರು: ಗಾಂಜಾ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟ ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹದ ಸಿಬಂದಿ ಪ್ರಕಾಶ್ ಗಾವಡೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Advertisement
ಕಾರಾಗೃಹದಲ್ಲಿ ಕೆಐಎಸ್ಎಫ್ ಸಿಬಂದಿ ತಪಾಸಣೆ ನಡೆಸುವ ಸಂದರ್ಭ ಪ್ರಕಾಶ್ ಬಳಿ ಗಾಂಜಾ ಪತ್ತೆಯಾಗಿತ್ತು. ಈ ಬಗ್ಗೆ ಮೇ 11ರಂದು ಬರ್ಕೆ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿತ್ತು.