Advertisement
ತೌಹೀದ್ ಇನ್ಸ್ಟಿಟ್ಯೂಟ್ನ ಅಕ್ತರ್ ಅಹಮದ್ ಖಾನ್ ಜಾಥಾಕ್ಕೆ ಜಾಲನೆ ನೀಡಿದರು. ಗಂಗೊಳ್ಳಿಯ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಿಂದ ಹೊರಟ ಕಾಲ್ನಡಿಗೆ ಜಾಥಾವು ನಗರದ ವಿವಿಧ ಪ್ರಮುಖ ಭಾಗಗಳಲ್ಲಿ ಸಂಚರಿಸಿ, ಗಂಗೊಳ್ಳಿಯ ಎಸ್.ವಿ. ಪ.ಪೂ. ಕಾಲೇಜಿನಲ್ಲಿ ಸಮಾಪನಗೊಂಡಿತು. ಜಾಥಾದಲ್ಲಿ ಗಂಗೊಳ್ಳಿಯ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು.
ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್ಐಗಳಾದ ಜಯರಾಮ್, ರಘುರಾಮ್, ಬಿಆರ್ಪಿ ಸುಷ್ಮಾ, ಜಮಾತೆ ಇಸ್ಲಾಮಿ ಹಿಂದ್ ಗಂಗೊಳ್ಳಿ ಮಾಜಿ ಅಧ್ಯಕ್ಷ ಮನ್ಸೂರ್, ಎಸ್ಐಓ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ರಿಯಾನ್ ಉಡುಪಿ, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಡಾ| ಫಹೀಮ್ ಹೂಡೆ ಉಪಸ್ಥಿತರಿದ್ದರು.
Related Articles
Advertisement