Advertisement

ಗಂಗೊಳ್ಳಿ: ಅಕ್ರಮ ದನ ಸಾಗಾಟ,ಇಬ್ಬರ ಸೆರೆ, ವಾಹನ ವಶ

12:14 AM Nov 12, 2022 | Team Udayavani |

ಗಂಗೊಳ್ಳಿ: ಹೊಸಾಡು ಗ್ರಾಮದ ಅರಾಟೆ ಬಸ್‌ ನಿಲ್ದಾಣದ ಬಳಿಯ ರಾ.ಹೆ. 66ರಲ್ಲಿ ನ. 11ರಂದು ಎಸ್‌ ಐ ವಿನಯ್‌ ಕೊರ್ಲಹಳ್ಳಿ ನೇತೃತ್ವದ ಗಂಗೊಳ್ಳಿ ಪೊಲೀಸರ ತಂಡ ತಪಾಸಣೆ ನಡೆಸುತ್ತಿದ್ದಾಗ ಪಿಕಪ್‌ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಉಸ್ಮಾನ್‌ ಮತ್ತು ಜೋಸೆಫ್ ಡಿ’ಸೋಜಾ ಬಂಧಿತರು. ಶೇಖರ ಶೆಟ್ಟಿ ಪರಾರಿಯಾಗಿದ್ದಾರೆ. ಮೊವಾಡಿಯಿಂದ ಕುಂದಾಪುರಕ್ಕೆ ಅಕ್ರಮವಾಗಿ ಎರಡು ದನಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next