Advertisement

ಗಂಗೊಳ್ಳಿ : ಮತ್ತೋಂದು ಸ್ಕೂಟರ್‌ಗೆ ಬೆಂಕಿ, ಆರೋಪಿ ಸೆರೆ

12:43 PM Jan 14, 2018 | |

ಕುಂದಾಪುರ: ಗಂಗೊಳ್ಳಿ ಯಲ್ಲಿ  ಶನಿವಾರ ಮುಂಜಾವ 3 ಗಂಟೆ ಸುಮಾರಿಗೆ ಮತ್ತೋಂದು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲಾಗಿದ್ದು, ಕಳೆದ ಕೆಲವು ದಿನಗಳಿಂದ ಸಂಭವಿಸಿದ ಮೂರನೇ ಘಟನೆಯಾಗಿದೆ. ಶನಿವಾರದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು  ಪೊಲೀಸರು ತತ್‌ಕ್ಷಣ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಗಂಗೊಳ್ಳಿಯ ದಾಕುಹಿತ್ಲು ನಿವಾಸಿ ಗುರುರಾಜ್‌ ಖಾರ್ವಿ (28) ಬಂಧಿತನಾಗಿದ್ದು,  ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

Advertisement

ಘಟನೆ ವಿವರ
ಗಂಗೊಳ್ಳಿಯ ತಾಕಿಯಾ ಮೌಲಾ ನಿವಾಸಿ, ಮಸೀದಿಯಲ್ಲಿ ಕಾರ್ಯ ನಿರ್ವಹಿಸುವ ನಯೀಂ ಮನೆ ಮುಂದೆ ನಿಲ್ಲಿಸಲಾದ ಆ್ಯಕ್ಟಿವಾ ಹೋಂಡಾ ಸ್ಕೂಟರ್‌ಗೆ ಬೆಂಕಿ ಹಚ್ಚಿ ಗುರುರಾಜ್‌ ಓಡಿ ಹೋಗುತ್ತಿರುವು ದನ್ನು ಸ್ಥಳೀಯ ರೋರ್ವರು ನೋಡಿದ್ದಾರೆ.  ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತತ್‌ಕ್ಷಣ ಕಾರ್ಯ ಪ್ರವೃತ್ತರಾದ ಗಂಗೊಳ್ಳಿ ಠಾಣೆ ಪ್ರಭಾರ ಎಸ್‌ಐ ಸುಬ್ಬಣ್ಣ ಹಾಗೂ ಸಿಬಂದಿ, ದಾಕುಹಿತ್ಲಿನಲ್ಲಿರುವ ಗುರುರಾಜ್‌ ಮನೆಗೆ ತೆರಳಿ ಅಲ್ಲಿಂದ ಆತನನ್ನು ವಶಕ್ಕೆ ಪಡೆದರು. ಘಟನೆ ಸಂಭವಿಸಿದ ಒಂದೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದು, ಸಾರ್ವಜನಿಕರು ನೆಮ್ಮದಿ ಪಡುವಂತಾಗಿದೆ. 

ಭಾರೀ ಕಟ್ಟೆಚ್ಚರ
ಈ ಹಿಂದೆ ಎರಡು ದ್ವಿಚಕ್ರ ವಾಹನ ಗಳಿಗೆ ಬೆಂಕಿ  ಹಚ್ಚಲಾಗಿತ್ತು. ಬಳಿಕ ಗಂಗೊಳ್ಳಿ ಉದ್ವಿಗ್ನಗೊಂಡಿದ್ದು, ಸೂಕ್ತ ಪೊಲೀಸ್‌ ಬಂದೋಬಸ್ತ್  ಮಾಡ ಲಾಗಿತ್ತು. ಪರಿಸ್ಥಿತಿ ಬಹುತೇಕ ಶಾಂತ ಸ್ಥಿತಿಗೆ ಬಂದಿದೆ ಎನ್ನುವಾಗ  ಮತ್ತೂಂದು ಪ್ರಕರಣ ನಡೆದಿದೆ. ಸೂಕ್ಷ್ಮ ಪ್ರದೇಶವಾದ ಗಂಗೊಳ್ಳಿ ಯಲ್ಲಿ ಮತ್ತೆ  ಉದ್ವಿಗ್ನವಾಗದಂತೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next