Advertisement

ಗಂಗೊಳ್ಳಿ: ವಿಷ ಸೇವಿಸಿ ಮೃತಪಟ್ಟ ತಮ್ಮ…ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ಅಣ್ಣ

09:17 PM Apr 15, 2023 | Team Udayavani |

ಗಂಗೊಳ್ಳಿ : ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿ ಮನನೊಂದ ಕೃಷ್ಣ (40) ಅವರು ವಿಷ ಸೇವಿಸಿ ಬಗ್ವಾಡಿ ಕೆಳಾಕಳಿಯಲ್ಲಿ ಸಾವನ್ನಪ್ಪಿದ್ದು, ಆದರೆ ತಮ್ಮನ ಸಾವಿನ ಬಗ್ಗೆ ಸಂಶಯವಿರುವುದಾಗಿ ಅಣ್ಣ ದೂರು ನೀಡಿದ್ದಾರೆ.

Advertisement

14 ವರ್ಷಗಳ ಹಿಂದೆ ಕೃಷ್ಣ ಅವರು ಬಗ್ವಾಡಿಯ ಗೀತಾ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ದಾಂಪತ್ಯದಲ್ಲಿ ವಿರಸ ಉಂಟಾಗಿದ್ದು, ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿತ್ತು.

ಬೆಂಗಳೂರಿನಲ್ಲಿ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ ಅವರು 15 ದಿನಗಳ ಹಿಂದೆ ಊರಿಗೆ ಬಂದಿದ್ದು, ವಿಪರೀತ ಕುಡಿತದ ಚಟ ಹೊಂದಿದ್ದ ಅವರು ಎ. 14ರಂದು ರಾತ್ರಿ ಗೀತಾ ಅವರ ಮನೆಗೆ ಹೋಗಿ ಗಲಾಟೆ ಮಾಡಿ ಬಂದಿದ್ದರು. ಅದಾದ ಬಳಿಕ ಇದೇ ವೇದನೆಯಿಂದ ಮನನೊಂದು ಎ. 15ರ ಬೆಳಗ್ಗೆ 7.45ರ ಒಳಗೆ ಯಾವುದೋ ಅಮಲು ಪದಾರ್ಥ ಸೇವಿಸಿ ಮೃತಪಟ್ಟಿರಬಹುದು ಎನ್ನಲಾಗಿದೆ.

ಅಣ್ಣ ಗೋಪಾಲ ಅವರು ತಮ್ಮನ ಸಾವಿನಲ್ಲಿ ಸಂಶಯವಿರುವುದಾಗಿ ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next