Advertisement

ಗಂಗೊಳ್ಳಿ : ಕಡಲು ಕೊರೆತ ಪ್ರದೇಶಕ್ಕೆ ಸಿಪಿಎಂ ನಿಯೋಗ

07:00 AM Jul 28, 2018 | Team Udayavani |

ಕುಂದಾಪುರ: ಗಂಗೊಳ್ಳಿಯ ಸಮುದ್ರ ಕಿನಾರೆಯ ಸಾಂತನಕೇರಿಯಲ್ಲಿ  8 ಕುಟುಂಬಗಳು ಕಡಲು ಕೊರೆತ ದಿಂದಾಗಿ ತೀವ್ರ ಆತಂಕ ಎದುರಿಸುತ್ತಿದ್ದು ಶುಕ್ರವಾರ ಸಿಪಿಎಂ ಪಕ್ಷದ ನಿಯೋಗವು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿತು.

Advertisement

ಈಗಾಗಲೇ ಕಡಲ ಕೊರೆತದ ರಭಸಕ್ಕೆ ತಂಗಿನ ತೋಟಗಳು, ಆಸ್ತಿ ಪಾಸ್ತಿ ಹಾನಿಗೊಳಗಾಗಿದ್ದು ಕುಟುಂಬಗಳು ನಷ್ಟ ಅನುಭವಿಸಿವೆ. ಕುಟುಂಬಗಳು ಪ್ರತಿದಿನ ರಾತ್ರಿ ನಿದ್ದೆ ಮಾಡದೇ ಆತಂಕದಿಂದ ಬದುಕುವಂತಾಗುತಿದೆ ಎಂದು ಕುಟುಂಬದ ಹಿರಿಯ ಜೀವಗಳು ನಿಯೋಗದ ಜತೆ ತಮ್ಮ ಅಳಲು ತೋಡಿಕೊಂಡರು. ಕಡಲು ಕೊರೆತ ತಡೆಗಟ್ಟಲು ಶಾಶ್ವತ ಪರಿಹಾರಕ್ಕಾಗಿ ಸರಕಾರ ಶೀಘ್ರ ಕ್ರಮ ವಹಿಸಲು ಒತ್ತಾಯಿಸಿ ಸ್ಥಳೀಯರಿಂದ ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿ ಬಳಿ ನಿಯೋಗ ತೆರಳುವುದಕ್ಕೆ ತೀರ್ಮಾನಿಸಲಾಯಿತು.
 
ನಿಯೋಗದಲ್ಲಿ ಸಿಪಿಎಂ ಬೆ„ಂದೂರು ವಲಯ ಕಾರ್ಯದರ್ಶಿ ಸುರೇಶ್‌ ಕಲ್ಲಾಗರ, ಮುಖಂಡರಾದ ವೆಂಕಟೇಶ್‌ ಕೋಣಿ, ಸ್ಥಳೀಯ ಮುಖಂಡರಾದ ಚಿಕ್ಕ ಮೋಗವೀರ, ಅರುಣ್‌ ಕುಮಾರ್‌ ಗಂಗೊಳ್ಳಿ, ಸುಶೀಲ, ವಿವೇಕ್‌, ಅಭಿನಂದನ್‌ ಇದ್ದರು.ಜಿಲ್ಲಾಡಳಿತ ಶೀಘ್ರ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ನಿಯೋಗ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next