Advertisement

ಲಿಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರಿಗೆ ಗಂಗಾವತಿಯಲ್ಲಿ ಕ್ಯಾಂಡಲ್ ಹಿಡಿದು ಶ್ರದ್ಧಾಂಜಲಿ

09:47 AM Oct 07, 2021 | Team Udayavani |

ಗಂಗಾವತಿ :ಕೇಂದ್ರ ಸರ್ಕಾರದ ನೂತನ 3ಕೃಷಿ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ಯಲ್ಲಿ ಮೃತಪಟ್ಟ ರೈತರಿಗೆ ಗಂಗಾವತಿ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಸಮರ್ಪಣೆ ಮಾಡಿದರು .

Advertisement

ಈ ಸಂದರ್ಭದಲ್ಲಿ ನಗರಸಭೆ ಕಾಂಗ್ರೆಸ್ ಸದಸ್ಯ ಸೋಮನಾಥ ಭಂಡಾರಿ ಮಾತನಾಡಿ ,ಬಿಜಿಪಿ ಗೂಂಡಾ ಸಂಸ್ಕೃತಿಯನ್ನು ದೇಶದಲ್ಲಿ ತೋರಿಸುತ್ತಿದೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ದಲ್ಲಿ ಅವರಿಗೆ ನಂಬಿಕೆಯಿಲ್ಲ ಲಖಿಮ್ ಪುರ್ ದಲ್ಲಿ ರೈತರ ಮೇಲೆ ಕಾರನ್ನು ಹರಿಸಿ ರೈತರನ್ನು ಕೊಲ್ಲಲಾಗಿದೆ ಗಂಗಾವತಿ ತಾಲ್ಲೂಕಿನ ಕಲ್ಗುಡಿ ಯಲ್ಲಿಯೂ ಕಾಂಗ್ರೆಸ್ ಮುಖಂಡನ ಮೇಲೆ ಬಿಜೆಪಿ ಮುಖಂಡ ಟ್ರ್ಯಾಕ್ಟರ್ ನ್ನು ಹಾಯಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ .

ಇದನ್ನೂ ಓದಿ;- ಮೈಸೂರು: ನಾಡಹಬ್ಬಕ್ಕೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ.ಕೃಷ್ಣ

ಇದುವರೆಗೂ ಇಂತಹ ಕೃತ್ಯವೆಸಗಿದವ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿಲ್ಲ .ಬದಲಿಗೆ ಲಕಿಮ್ ಪುರದಲ್ಲಿ ಕೊಲೆಗೀಡಾದ ರೈತ ಕುಟುಂಬಗಳಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯನ್ನು ಪೊಲೀಸರು ಬಂಧಿಸಿರುವುದು ಖಂಡನೀಯವಾಗಿದೆ ಕೂಡಲೇ ಕೊಲೆ ಮಾಡಿರುವ ಕೇಂದ್ರ ಸಚಿವರ ಪುತ್ರನನ್ನು ಮತ್ತು ಕಲ್ಗುಡಿಯಲ್ಲಿ ಬ್ಯುಸಿ ಪ್ರಮುಖರನ್ನು ಬಂಧಿಸುವಂತೆ ಒತ್ತಾಯಿಸಿದರು .

ಈ ಸಂದರ್ಭದಲ್ಲಿ  ಕಾಂಗ್ರೆಸ್ ಪಕ್ಷದ ಮುಖಂಡರಾದ ವಿಶ್ವನಾಥ್ ಮಾಲಿ ಪಾಟೀಲ್, ರಾಮಣ್ಣ ಬಳ್ಳಾರಿ,ನಗರಸಭಾ ಸದಸ್ಯರಾದ ಸೋಮ ನಾಥ್ ಭಂಡಾರಿ,ಗಂಗಾವತಿ ಗ್ರಾಮೀಣ ಕಿಸಾನ್ ಘಟಕದ ಅಧ್ಯಕ್ಷ ನಿರುಪಾದಿಗೌಡ ಮಾಲಿಪಾಟೀಲ್ ಗ್ರಾಮ ಪಂಚಾಯಿತಿ ಸದಸ್ಯರಾದ ದೇವರಾಜ ಬಡಿಗೇರ ,ಪಕ್ಷದ ವಿವಿಧ ಘಟಕಗಳ ಮುಖಂಡರುಗಳಾದ ಜುಬೇರ್, ಮಲ್ಲೇಶ್ ದೇವರಮನಿ,ಸಲ್ಮಾನ್ ಬಿಚ್ಚುಗತ್ತಿ, ಸಂದೀಪ್, ಸನ್ನಿಕ,ಭೀಮೇಶ್ ಅತ್ತಿಮರದ,  ಪರಶುರಾಮ್ ಕಿರಿಕಿರಿ,ಮಂಜುನಾಥ್,ವೆಂಕಟೇಶ್ ಬಾಬು ,ಚಂದ್ರಶೇಖರ್ ಕಲ್ಮನಿ,ಮುಕ್ತಿಯಾರ್ ಹುಸೇನ್ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next