Advertisement

ನಕಲಿ ರಸಗೊಬ್ಬರ ಮಾರಾಟ ಪ್ರಕರಣ : ಬಸಾಪಟ್ಟಣ ವ್ಯಾಪಾರಿ ಸೇರಿ ಐವರ ವಿಚಾರಣೆ

10:10 PM Jul 18, 2022 | Team Udayavani |

ಗಂಗಾವತಿ : ಯಾದಗಿರಿ ಮತ್ತು ಬಿಜಾಪೂರ ಜಿಲ್ಲೆಯಲ್ಲಿ ನಡೆದ ನಕಲಿ ರಸಗೊಬ್ಬರ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದ ಚನ್ನಮಲ್ಲಿಕಾರ್ಜುನ ಆಗ್ರೋ ಎಜೇನ್ಸಿ ಮಾಲೀಕ ಪೀರಸಾಬ ಸೇರಿ ಐವರನ್ನು ವಿಚಾರಣೆಗಾಗಿ ಗೋಗಿ ಪೊಲೀಸ್ ಠಾಣೆ ಕರೆತಂದಿದ್ದಾರೆ.

Advertisement

ಶಹಪೂರ ತಾಲೂಕಿನ ಗೋಗಿ ಹೋಬಳಿಯ ಹೊಸ್ಕೇರಾ ಗ್ರಾಮದಲ್ಲಿ ಡಿಎಪಿ ಜೈಕಿಸಾನ್ ಹೆಸರಿನ ಬ್ಯಾಗುಗಳಲ್ಲಿ ಸಾವಿರಾರು ಟನ್ ಮರಳು(ಉಸುಗು) ಮಿಶ್ರಿತ ರಸಗೊಬ್ಬರ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಗಿ ಪೊಲೀಸ್ ಠಾಣೆಯಲ್ಲಿ ರೈತರು ಪ್ರಕರಣ ದಾಖಲಿಸಿದ್ದು ಪೊಲೀಸ್ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದ್ದು ಗೋಗಿ ಗ್ರಾಮದಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡಿದ ಕುರಿತು ಅಲ್ಲಿಯ ಡೀಲರ್ ಯಡ್ರಾಮಿಯ ವ್ಯಾಪಾರಿ ಹೆಸರು ಹೇಳಿದ್ದಾರೆ.

ಯಡ್ರಾಮಿಯ ಡೀಲರ್ ಸಿಂದಗಿ ವ್ಯಾಪಾರಿಯ ಹೆಸರು ಹೇಳಿದ್ದು ಸಿಂದಗಿ ಡೀಲರ್‌ನ್ನು ವಿಚಾರಿಸಿದಾಗ ಗಂಗಾವತಿಯ ಬಸಾಪಟ್ಟಣದ ಪೀರಸಾಬ ಎಂಬುವರಿಂದ ರಸಗೊಬ್ಬರ ಖರೀಸಿದಿ ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ.

ತನಿಖೆ ಕೈಗೊಂಡಿರುವ ಗೋಗಿ ಠಾಣೆಯ ಪೋಲಿಸರು ರವಿವಾರ ಸಂಜೆ ಗಂಗಾವತಿಯ ಬಸಾಪಟ್ಟಣಕ್ಕೆ ಆಗಮಿಸಿ ಚನ್ನಮಲ್ಲಿಕಾರ್ಜುನ ಆಗ್ರೋ ಎಜೇನ್ಸಿ ಮಾಲೀಕ ಪೀರಸಾಬ, ಗೋಗಿ ಹೊಸ್ಕೇರಾ ಗ್ರಾಮದ ಬೀರಲಿಂಗಪ್ಪ, ಮಲ್ಲಪ್ಪ ನಾಗನಟಗಿ,ಪರಮಾನಂದ ಸಿಂದಗಿ, ಭೀಮಸಿಂಗ್ ರಾಠೋಡ್ ಎಂಬವರರನ್ನು ವಿಚಾರಣೆಗೆ ಕರೆದುಕೊಂಡು ಬಂದಿದ್ದಾರೆ.

ಪ್ರಕರಣ ಕುರಿತು ಉದಯವಾಣಿ ಜತೆ ಗೋಗಿ ಪೊಲೀಸ್ ಠಾಣೆಯ ಪಿಎಸ್‌ಐ ಅಯ್ಯಪ್ಪ ಮಾತನಾಡಿ, ನಕಲಿ ರಸಗೊಬ್ಬರ ಕುರಿತು ರೈತರು ನೀಡಿದ ದೂರಿನ ಹಿನ್ನೆಲೆಯಲ್ಲಿ ಐವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿಸಿದರು.

Advertisement

ಇದನ್ನೂ ಓದಿ : ಕೋವಿಡ್ ಪರಿಹಾರ ತ್ವರಿತವಾಗಿ ನೀಡಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ 

ನಕಲಿ ಗೊಬ್ಬರ ಮಾರಾಟ ವ್ಯಾಪಕ ಜಾಲ :
ಗೋಗಿ ಹೋಬಳಿಯ ಹೊಸ್ಕೇರಾ ಗ್ರಾಮದಲ್ಲಿ ನಕಲಿ ರಸಗೊಬ್ಬರ ಮಾರಾಟದ ಕುರಿತು ರೈತರ ದೂರಿನ ಹಿನ್ನೆಲೆಯಲ್ಲಿ ಗೋಗಿ ಠಾಣೆಯ ಪೊಲೀಸರಿಗೆ ಕೃಷಿ ಇಲಾಖೆಯಿಂದ ಕೇಸ್ ದಾಖಲು ಮಾಡಲಾಗಿದೆ. ವಿವಿಧ ಸ್ಥಳಗಳಲ್ಲಿ 130 ಬ್ಯಾಗ್ ನಕಲಿ ರಸಗೊಬ್ಬರ ಸೀಜ್ ಮಾಡಲಾಗಿದೆ. ನಕಲಿ ಗೊಬ್ಬರ ಮಾರಾಟ ದಂಧೆ ಯಾದಗಿರಿ, ಕೊಪ್ಪಳ, ಬಿಜಾಪೂರ, ಬಾಗಲಕೋಟೆ, ಗಂಗಾವತಿ ಪ್ರದೇಶದಲ್ಲಿ ನಕಲಿ ಗೊಬ್ಬರ ಮಾರಾಟ ಮಾಡುವ ಕುರಿತು ಮಾಹಿತಿ ಬಂದಿದ್ದು ಪೊಲೀಸರ ವಿಚಾರಣೆ ಬಳಿಕ ಹೊರ ಬರಬೇಕಿದೆ ಎಂದು ಶಹಾಪುರ ಸಹಾಯಕ ಕೃಷಿ ನಿರ್ದೇಶಕ ಸುನೀಲಕುಮಾರ ಉದಯವಾಣಿ ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next