Advertisement

ಗಂಗಾವತಿ: ಪಿಎಫ್ಐ ಮುಖಂಡರ ಬಂಧನ; ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಪಥಸಂಚಲನ

12:33 PM Sep 23, 2022 | Team Udayavani |

ಗಂಗಾವತಿ: ರಾಜ್ಯದಾದ್ಯಂತ ಪಿಎಫ್ಐ ಹಾಗೂ ಇತರೆ ಸಂಘಟನೆಗಳ ಮುಖಂಡರ ಬಂಧನ ಮಾಡಿರುವ ಕುರಿತು ಪಿಎಫ್ಐ ಹಾಗೂ ಇತರೆ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಪೊಲೀಸ್ ಇಲಾಖೆ ಗಂಗಾವತಿಯ ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಥಸಂಚಲನ ನಡೆಸುವ ಮೂಲಕ ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದೆ.

Advertisement

ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ಹಾಗೂ ಡಿವೈಎಸ್ ಪಿ. ರುದ್ರೇಶ್ ಉಜ್ಜನಕೊಪ್ಪ ಇವರುಗಳ ನೇತೃತ್ವದಲ್ಲಿ ನಗರದ ಕಿಲ್ಲಾ ಏರಿಯಾ ಮಹೆಬೂಬ್ ನಗರ ಸಂತೆ ಬಯಲು, ಪ್ರಶಾಂತನಗರ ಇಸ್ಲಾಂಪುರ, ಮುಜಾವರ್ ಕ್ಯಾಂಪ್, ಅಂಗಡಿ ಸಂಗಣ್ಣ ಕ್ಯಾಂಪ್, ಗುಂಡಮ್ಮ ಕ್ಯಾಂಪ್, ಲಿಂಗರಾಜ ಕ್ಯಾಂಪ್ ಸೇರಿ ನಗರದ ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಥಸಂಚಲನ ಮಾಡಿ ಜನರಲ್ಲಿ ಜಾಗೃತಿ ಭರವಸೆ ಮೂಡಿಸಿದರು.

ಪೋಲಿಸ್ ಅಧಿಕಾರಿಗಳಾದ ಸಿಪಿಐ ವೆಂಕಟಸ್ವಾಮಿ, ಮಂಜುನಾಥ, ಮಲ್ಲನಗೌಡರ್ ಸೇರಿದಂತೆ ಜಿಲ್ಲೆಯ ಮೀಸಲು ಪೊಲೀಸ್ ಪಡೆ ಡಿಆರ್ ಪೊಲೀಸ್ ಪಡೆ ಮತ್ತು ಪೊಲೀಸ್ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next