Advertisement

ತೊಗರಿ ಖರೀದಿ ಕೇಂದ್ರಕ್ಕೆಗಂಗಾಧರ ಶ್ರೀ ಚಾಲನೆ

12:15 PM Jan 19, 2018 | |

ದೇವರಹಿಪ್ಪರಗಿ: ಪಟ್ಟಣದ ತೊಗರಿ ಖರೀದಿ ಕೇಂದ್ರದಲ್ಲಿ ತೂಕ ಯಂತ್ರಕ್ಕೆ ಸದಯ್ಯನಮಠದ ವೀರ ಗಂಗಾಧರ
ಶ್ರೀಗಳು ಚಾಲನೆ ನೀಡಿದರು. ನಂತರ ಮಾತನಾಡಿದ ಶ್ರೀಗಳು, ಸರಕಾರ ಅನ್ನದಾತರಿಗಾಗಿ ಸಾಕಷ್ಟು ಅನುಕೂಲಗಳನ್ನು ಕಲ್ಪಿಸಿದೆ.

Advertisement

ಕೃಷಿ ಇಲಾಖೆ, ಸಹಾಯಕ ಕೃಷಿ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಪಡೆದು ಸದುಪಯೋಗ ಪಡಿಸಿಕೊಳ್ಳುವಂತೆ
ಸಲಹೆ ನೀಡಿದರು. ಪಿಕೆಪಿಎಸ್‌ ಅಧ್ಯಕ್ಷ ಕಾಶೀನಾಥ ಮಸಬಿನಾಳ ಮಾತನಾಡಿ, ನೋಂದಣಿ ಮಾಡಿದ ರೈತರಿಗೆ ಯಾವುದೇ ತೊಂದರೆಯಾಗದಂತೆ ಸರದಿ ಪ್ರಕಾರ ತೊಗರಿಯನ್ನು ಖರೀದಿ ಸಲಾಗುವುದು. ಅದಕ್ಕಾಗಿ ಸ್ಥಳದಲ್ಲಿ
ಕುಡಿಯುವ ನೀರು, ನೆರಳು, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ನೋಂದಣಿಯಾಗಿ ಸರದಿಯಲ್ಲಿರುವ ರೈತರಿಗೆ ಫೋನ್ ಮೂಲಕ ಮಾಹಿತಿ ನೀಡಲಾಗುವುದು. ಆದ್ದರಿಂದ ಯಾರು ಯಾವುದೇ ಆಮಿಷ, ಆತಂಕಕ್ಕೆ ಒಳಗಾಗದೇ ಸಹಕಾರ ನೀಡಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ರಮೇಶ ಮಶಾನವರ, ಸಿದ್ದು ಮಸಬಿನಾಳ, ಶಾಂತಪ್ಪ ಯಾಳಗಿ, ಪ್ರಕಾಶ ಕಂಬಾರ, ಆನಂದ ಮಶಾನವರ, ಮಲ್ಲಯ್ಯ ಹಿರೇಮಠ, ಬಸವರಾಜ ಹಳಿಮನಿ, ನಿಂಗು ಜಡಗೊಂಡ, ಕಲ್ಮೇಶ ಬುದ್ನಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next