Advertisement

ಗಂಗಾ ಶುದ್ಧೀಕರಣ ಶೀಘ್ರ ಪೂರ್ಣ: ಸತ್ಯಪಾಲ್‌

07:00 AM Sep 28, 2018 | Team Udayavani |

ಉಡುಪಿ: ಗಂಗಾ ನದಿ ಶುದ್ಧೀಕರಣ ಕೆಲಸ ಜನವರಿಯಲ್ಲಿ ಶೇ.70ರಿಂದ 80ರಷ್ಟು ಆಗಲಿದೆ ಎಂದು ಕೇಂದ್ರ ಮಾನವ ಸಂಪದಭಿವೃದ್ಧಿ ಸಹಾಯಕ ಮತ್ತು ಗಂಗಾ ಶುದ್ಧೀಕರಣ ಉಸ್ತುವಾರಿ ಸಚಿವ ಡಾ| ಸತ್ಯಪಾಲ್‌ ಸಿಂಗ್‌ ಅವರು ಹೇಳಿದರು.

Advertisement

ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ರಾಜ್ಯ ಸರಕಾರದ ಅನುಷ್ಠಾನದಲ್ಲಿ ನಿರ್ವಹಣೆಯಾಗುತ್ತಿದೆ. ಅಲಹಾಬಾದ್‌ನಿಂದ ಕಾನ್ಪುರದವರೆಗಿನ ಕೈಗಾರಿಕೆಗಳ ಕೊಳಚೆ ನೀರು ನದಿಗೆ ಬಿಡುವುದನ್ನು ನಿರ್ಬಂಧಿಸಲಾಗಿದೆ. ಉತ್ತರ ಪ್ರದೇಶ, ಉತ್ತರಾಖಂಡದ ಮುಖ್ಯಮಂತ್ರಿಗಳು ಅತಿ ಶೀಘ್ರ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಅಲಹಾಬಾದ್‌ ಕುಂಭಮೇಳದ ಹೊತ್ತಿಗೆ ಬಹುತೇಕ ಮುಗಿಯಲಿದೆ ಎಂದರು. 
ಮುಂದಿನ ಲೋಕಸಭಾ ಚುನಾವಣೆ ಅಭಿವೃದ್ಧಿ ಮತ್ತು ಸುರಕ್ಷೆಯ ಆಧಾರದಲ್ಲಿ ನಡೆಯಲಿದೆ ಎಂದರು. ನಕ್ಸಲ್‌ ಪೀಡೆ ಕುರಿತು ಪ್ರಶ್ನಿಸಿದಾಗ, ಅವರು ಯುವಕರ ಮನಸ್ಸನ್ನು ಕೆಡಿಸಿ ಕಾರ್ಯ ಸಾಧಿಸುತ್ತಿದ್ದಾರೆ. ಸೈದ್ಧಾಂತಿಕವಾಗಿ ಅದಕ್ಕೆ ಉತ್ತರಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next