Advertisement

ಗಂಗಾ ಶುದ್ಧೀಕರಣ ಟೀಕೆಗೆ 42 ದಿನ ಜೈಲು!

12:36 PM Oct 12, 2017 | Team Udayavani |

ನವದೆಹಲಿ: ಕೇಂದ್ರ ಸರ್ಕಾರದ ಗಂಗಾ ಶುದ್ಧೀಕರಣ ಮತ್ತು ರಾಮ ಮಂದಿರ ನಿರ್ಮಾಣ ಮಾಡುವ ಬಿಜೆಪಿಯ ಪ್ರಸ್ತಾವಿತ ಯೋಜನೆ ಬಗ್ಗೆ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಲಘುವಾಗಿ ಬರೆದಿದ್ದ. ಜತೆಗೆ ಯಾವ ಕಾರಣಕ್ಕಾಗಿ ಹಜ್‌ ಯಾತ್ರೆಗೆ ನೀಡುತ್ತಿರುವ ಸಬ್ಸಿಡಿ ಹಿಂತೆಗೆಯುತ್ತಿಲ್ಲ ಎಂದು ಪ್ರಶ್ನಿಸಿದ್ದ. ಮುಜಾಫ‌ರ್‌ನಗರದ ಯುವಕ ಝಕೀರ್‌ ಅಲಿ ತ್ಯಾಗಿ ಎಂಬಾತ ಈ ಬಗ್ಗೆ ಅಭಿಪ್ರಾಯ ಪೋಸ್ಟ್‌ ಮಾಡಿದ್ದ. ಅದನ್ನು ಉತ್ತರ ಪ್ರದೇಶ ಪೊಲೀಸರು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಿ ಏ.2ರಂದು ಬಂಧಿಸಿದ್ದರು. ಜಾಮೀನು ಸಿಗದಿದ್ದುದರಿಂದ ಆತ ಜೈಲಲ್ಲಿ 42 ದಿನಗಳ ಕಾಲ ಇರುವಂತಾಗಿತ್ತು. ಕೊನೆಗೆ ಜಾಮೀನು ಸಿಕ್ಕಿದ ಬಳಿಕ ಬಿಡುಗಡೆಯಾಗಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next