Advertisement

ಸಕ್ರಬೈಲು: ಅನಾರೋಗ್ಯದಿಂದ ಬಳಲುತ್ತಿದ್ದ “ದಾವಣಗೆರೆಯ ಗಣೇಶ’ಆನೆ ಸಾವು

11:19 PM Nov 12, 2022 | Team Udayavani |

ಶಿವಮೊಗ್ಗ: ಇಲ್ಲಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ “ದಾವಣಗೆರೆಯ ಗಣೇಶ’ ಆನೆ ಮೃತಪಟ್ಟಿದೆ.

Advertisement

ದಾವಣಗೆರೆಯ ಹಿರಿಯ ಉದ್ಯಮಿ, ಶಾಸಕ ಶಾಮನೂರು ಶಿವಶಂಕರಪ್ಪನವರ ಮಾಲಕತ್ವದಲ್ಲಿದ್ದ ಆನೆಯನ್ನು 2013-14ನೇ ಸಾಲಿನಲ್ಲಿ ಅನಾರೋಗ್ಯದ ಕಾರಣದಿಂದ ಸಕ್ರೆಬೈಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗಿತ್ತು. ಆನೆ ನಿಲ್ಲಲೂ ಆಗದೆ ಸಾಕಷ್ಟು ಸಂಕಷ್ಟ ಎದುರಿಸುತ್ತಿತ್ತು. ಬಳಿಕ ಬಿಡಾರದಲ್ಲಿ ಸಿಕ್ಕ ಚಿಕಿತ್ಸೆ ಹಾಗೂ ಆರೈಕೆಯಿಂದ ಚೇತರಿಸಿಕೊಂಡಿತ್ತು. ಇತ್ತೀಚೆಗೆ ಒಮ್ಮೆ ಬಿದ್ದಿದ್ದು, ಆ ಬಳಿಕ ಅದರ ಆರೋಗ್ಯ ತೀವ್ರ ಹದಗೆಟ್ಟಿತ್ತು.

ಇದನ್ನೂ ಓದಿ : ನಾಯಿ ಆಸೆಗೆ ಬಂದು ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮದ ಜನ

 

Advertisement

Udayavani is now on Telegram. Click here to join our channel and stay updated with the latest news.

Next