Advertisement

ಕೋಟುಮಚಗಿ ಮುಸ್ಲಿಂ ಯುವಕನ ಗಣೇಶ ಭಕ್ತಿ 

04:31 PM Sep 15, 2018 | |

ಕೋಟುಮಚಗಿ: ಕೋಟುಮಚಗಿ ಗ್ರಾಮದ ಮುಸ್ಲಿಂ ಯುವಕ ಜೀವನಸಾಬ ಬಿನ್ನಾಳ ಕಳೆದ ಐದು ವರ್ಷಗಳಿಂದ ಸರ್ಕಾರಿ ಪ್ರೌಢ ಶಾಲೆಗೆ ಗಣೇಶ ಮೂರ್ತಿಯನ್ನು ದೇಣಿಗೆಯಾಗಿ ನೀಡುತ್ತಾ ಬಂದಿದ್ದಾರೆ.

Advertisement

ಜೀವನಸಾಬ ಬಿನ್ನಾಳ ಮಾತನಾಡಿ, ಕಳೆದ ಐದು ವರ್ಷಗಳಿಂದ ನಾನು ಶಾಲೆಗೆ ಗಣೇಶ ಮೂರ್ತಿಯನ್ನು ದೇಣಿಗೆಯಾಗಿ ನೀಡುತ್ತಿರುವುದರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ವಿಘ್ನ ನಿವಾರಕ ಒಳ್ಳೆಯದನ್ನು ಮಾಡಿದ್ದರಿಂದ ನಾನು ಜೀವಿತಾವಧಿವರೆಗೂ ಶಾಲೆಗೆ ಗಣೇಶ ಮೂರ್ತಿ ನೀಡುತ್ತೇನೆ ಎಂದು ವಾಗ್ಧಾನ ಮಾಡಿದ್ದೇನೆ. ಎಸ್‌ಡಿಎಂಸಿ ಅಧ್ಯಕ್ಷಪ್ರಕಾಶ ಮುಧೋಳ, ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ ಕುಲಕರ್ಣಿ, ಹಿಂದು ಸಂಘಟನೆ ಯುವ ಮುಖಂಡ ಶರಣಪ್ಪ ಕಾಡರ ಸೇರಿದಂತೆ ಶಾಲೆ ಸಿಬ್ಬಂದಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next