Advertisement

Kerala: 84ಕ್ಕೆ ಕಾಲಿಟ್ಟ ಗಾನಗಂಧರ್ವ ಯೇಸುದಾಸ್‌- ಕೊಲ್ಲೂರಿಗೆ ಬಾರದ ಹಿರಿಯ ಗಾಯಕ

09:49 PM Jan 10, 2024 | Team Udayavani |

ತಿರುವನಂತಪುರ: ಸಂಗೀತ ಸ್ವರ ಸಾಮ್ರಾಟ ಯೇಸುದಾಸ್‌ ಅವರಿಗೆ ಬುಧವಾರ 83 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ. ಗಾನಗಂಧರ್ವ ಎಂದೇ ಖ್ಯಾತರಾದ ಯೇಸುದಾಸ್‌ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೇರಿದಂತೆ ಹಲವಾರು ಮಂದಿ ಶುಭಕೋರಿದ್ದಾರೆ.

Advertisement

ಪ್ರತಿವರ್ಷ ಯೇಸುದಾಸ್‌ ತಮ್ಮ ಜನ್ಮದಿನದಂದು ಕರ್ನಾಟಕದ ಕೊಲ್ಲೂರಿನ ಮೂಕಾಂಬಿಕಾ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಈ ವರ್ಷ ಕುಟುಂಬದೊಂದಿಗೆ ಅಮೆರಿಕದಲ್ಲಿರುವ ಹಿನ್ನೆಲೆಯಲ್ಲಿ ಕೊಲ್ಲೂರಿಗೆ ಆಗಮಿಸಲು ಸಾಧ್ಯವಾಗಿಲ್ಲವೆಂದೂ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next