Advertisement

ತಂಬುತಡ್ಕದಲ್ಲಿ ಜೂಜಾಟ: ಆರು ಮಂದಿಯ ಬಂಧನ

10:38 PM Mar 29, 2023 | Team Udayavani |

ಪುತ್ತೂರು: ನಿಡ್ಪಳ್ಳಿ ಗ್ರಾಮದ ತಂಬುತಡ್ಕದಲ್ಲಿ ಜೂಜು ಅಡ್ಡೆಗೆ ದಾಳಿ ನಡೆಸಿದ ಸಂಪ್ಯ ಪೊಲೀಸರು 6 ಮಂದಿಯನ್ನು ಬಂಧಿಸಿ ನಗದು ಮತ್ತು ಮೊಬೈಲ್‌ಗ‌ಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಬಂಟ್ವಾಳ ಅನಂತಾಡಿ ಗ್ರಾಮದ ಲೋಕೇಶ್‌ ಗೌಡ, ಆರ್ಲಪದವು ಭರಣ್ಯ ನಿವಾಸಿ ಹೇಮನಾಥ ಬಿ, ಕೌಡಿಚ್ಚಾರು ಗ್ರಾಮದ ಸಂತೋಷ, ದರ್ಬೆತ್ತಡ್ಕ ಕುರಿಂಜ ಸದಾನಂದ, ನಿಡ್ಪಳ್ಳಿ ಗೋಲಿತ್ತಡಿಯ ಉಮೇಶ್‌, ಸಾಲೆತ್ತೂರು ಸತೀಶ ಬಂಧಿತ ಆರೋಪಿಗಳು.

ಆರೋಪಿಗಳು ಅಕ್ರಮವಾಗಿ ಹಣವಿಟ್ಟು ಜೂಜಾಟ ಆಡುತ್ತಿದ್ದರು. ಮಾಹಿತಿ ಪಡೆದ ಸಂಪ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ಜೂಜಾಟಕ್ಕೆ ಬಳಸಿದ್ದ ಸೊತ್ತುಗಳನ್ನು ವಶಕ್ಕೆ ಪಡೆದು ರೂ. 35,710 ರೂ. ನಗದು ಮತ್ತು 6 ಮೊಬೈಲ್‌ ಪೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next