Advertisement

ಕಳಂಕಿತ ಅಜರ್‌ ಗಂಟೆ ಬಾರಿಸಿದ್ದಕ್ಕೆ ಗಂಭೀರ್‌ ಆಕ್ರೋಶ

06:35 AM Nov 06, 2018 | Team Udayavani |

ಕೋಲ್ಕತಾ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌ ಭಾನುವಾರ ಗಂಟೆ ಬಾರಿಸಿ ಭಾರತ-ವೆಸ್ಟ್‌ ಇಂಡೀಸ್‌ ನಡುವಿನ 1ನೇ ಟಿ20 ಪಂದ್ಯಕ್ಕೆ ಚಾಲನೆ ನೀಡಿದ್ದರು. ಗಂಟೆ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡುವುದು ಕೋಲ್ಕತಾದಲ್ಲಿ ಶುರುವಾಗಿರುವ ಹೊಸ ಪದ್ಧತಿ.

Advertisement

ಇಂತಹ ಅವಕಾಶವನ್ನು ಮ್ಯಾಚ್‌ಫಿಕ್ಸಿಂಗ್‌ ಕಾರಣಕ್ಕೆ ಬಿಸಿಸಿಐನಿಂದ ಆಜೀವ ನಿಷೇಧಕ್ಕೊಳಗಾಗಿದ್ದ ಮೊಹಮ್ಮದ್‌ ಅಜರುದ್ದೀನ್‌ಗೆ ನೀಡಿದ್ದು ಖ್ಯಾತ ಕ್ರಿಕೆಟಿಗ ಗೌತಮ್‌ ಗಂಭೀರ್‌ಗೆ ಸಿಟ್ಟು ತರಿಸಿದೆ. ಭಾನುವಾರ ಭಾರತ ವಿಂಡೀಸ್‌ ವಿರುದ್ಧ ಗೆದ್ದರೂ, ಬಿಸಿಸಿಐ, ಸಿಒಎ ಮತ್ತು ಬಂಗಾಳ ಕ್ರಿಕೆಟ್‌ ಸಂಸ್ಥೆಗಳು ಸೋತಿವೆ. ಅಜರುದ್ದೀನ್‌ರಂತಹ ಕಳಂಕಿತರಿಗೆ ಗಂಟೆ ಬಾರಿಸುವ ಅವಕಾಶ ನೀಡಿದ್ದೇಕೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next