Advertisement

ಶೆಹ್ಲಾ ಟ್ವೀಟ್‌ಗೆ ಗಡ್ಕರಿ ಆಕ್ರೋಶ

05:08 PM Jun 11, 2018 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿ ಅವರ ಹತ್ಯೆಗೆ ನಕ್ಸಲರು ಸಂಚು ರೂಪಿಸಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿ ಜೆಎನ್‌ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್‌ ಮಾಡಿದ್ದ ಟ್ವೀಟ್‌ವೊಂದು ಕೇಂದ್ರ ಸಚಿವ ಗಡ್ಕರಿ ಅವರ ಆಕ್ರೋಶಕ್ಕೆ ಕಾರಣವಾಗಿದೆ. ವಿವಾದಾತ್ಮಕ ಟ್ವೀಟ್‌ ಅನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಗಡ್ಕರಿ, ಶೆಹ್ಲಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

ಮೋದಿ ಹತ್ಯೆ ಸಂಚು ವಿಚಾರ ಬಹಿರಂಗಗೊಳ್ಳುತ್ತಲೇ ಟ್ವೀಟ್‌ ಮಾಡಿದ್ದ ಶೆಹ್ಲಾ ರಶೀದ್‌, “ಮೋದಿ ಅವರನ್ನು ಹತ್ಯೆಗೈಯ್ಯಲು ಆರೆಸ್ಸೆಸ್‌/ಗಡ್ಕರಿ ಅವರೇ ಯೋಜನೆ ರೂಪಿಸಿದಂತಿದೆ. ನಂತರ, ಯಾರೋ ಮುಸ್ಲಿಮರು ಅಥವಾ ಕಮ್ಯೂನಿಸ್ಟ್‌ಗಳ ಮೇಲೆ ಆರೋಪ ಹೊರಿಸಿ, ಮುಸ್ಲಿಮರ ಮೇಲೆ ಹಲ್ಲೆಮಾಡಿ ಕೊಲ್ಲುವ ಯೋಜನೆ ಇರಬಹುದು’ ಎಂದು ಬರೆದಿದ್ದರು. ಶೆಹ್ಲಾ ಅವರ ಟ್ವೀಟ್‌ಗೆ ಪ್ರತಿಯಾಗಿ ಸಚಿವ ಗಡ್ಕರಿ ಅವರೂ ಟ್ವೀಟ್‌ ಮಾಡಿದ್ದು, “ಪ್ರಧಾನಿ ಮೋದಿ ಹತ್ಯೆ ಸಂಚು ಕುರಿತು ನನ್ನ ವಿರುದ್ಧ ಅತ್ಯಂತ ಕೆಟ್ಟದಾಗಿ ಹೇಳಿಕೆ ನೀಡಿರುವ ಸಮಾಜದ್ರೋಹಿ ಶಕ್ತಿಗಳ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ’ ಎಂದು ಶೆಹ್ಲಾರ ಹೆಸರೆತ್ತದೇ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಶೆಹ್ಲಾ, “ವಿಶ್ವದ ಅತಿದೊಡ್ಡ ಪಕ್ಷದ ನಾಯಕರೊಬ್ಬರು ಒಂದು ವ್ಯಂಗ್ಯಾತ್ಮಕ ಟ್ವೀಟ್‌ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next