ಶುಕ್ರವಾರ ನಗರದಲ್ಲಿ ಸಂಭ್ರಮದಿಂದ ಜರುಗಿತು. ಪೂರ್ಣ ಕುಂಭ ಕಳಸ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರ್ತಿಕೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ನ. 20ರಿಂದ ದೇವಿ ಪುರಾಣ ಆಯೋಜಿಸಲಾಗಿತ್ತು. ಕಳೆದ ಒಂಬತ್ತು ದಿನಗಳಿಂದ ಪ್ರವಚನಕಾರ ರಮೇಶ ಯಾಳಗಿ ಪುರಾಣ ಪ್ರವಚನ ನಡೆಸಿಕೊಟ್ಟಿದ್ದರು. ಶುಕ್ರವಾರ ಪುರಾಣ ಮಂಗಲೋತ್ಸವ ಅಂಗವಾಗಿ ಮೆರವಣಿಗೆ ಏರ್ಪಡಿಸಲಾಗಿತ್ತು.
ದೇವಸ್ಥಾನ ಪ್ರಾಂಗಣದಿಂದ ಹೊರಟ ಮೆರವಣಿಗೆ ಅರಮನೆ ಮಾರ್ಗವಾಗಿ ಭಾಜಾ ಭಜಂತ್ರಿ ಡೊಳ್ಳಿನೊಂದಿಗೆ ನಗರದ ವೇಣೂಗೋಪಾಲ ಸ್ವಾಮಿ ದೇವಸ್ಥಾನದವರೆಗೆ ಮೆರವಣಿಗೆ ಜರುಗಿತು. ಮಾರ್ಗದ ಉದ್ದಕ್ಕೂ ಭಕ್ತರು ಮನೆ ಮುಂದೆ ಚಿತ್ತಾರದ ರಂಗೋಲಿ ಬಿಡಿಸಿ ದೇವಿಗೆ ಸ್ವಾಗತ ಕೋರಿದರು.
Advertisement
ನಂತರ ದೇವಸ್ಥಾನದಲ್ಲಿ ಸಮಂಗಲಿಯರಿಗೆ ಉಡಿ ತುಂಬುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ. ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ದೇವಿ ಅಷ್ಟೋತ್ತರ ಪಾರಾಯಣ ಹಾಗೂ ನಂತರ ಮಹಾ ಪ್ರಸಾದ ನರವೇರಿತು.