Advertisement

ಗದಗ: ಮೂವರಿಗೆ ಚಾಕು ಇರಿತ; ಗಾಯಾಳುಗಳು ಆಸ್ಪತ್ರೆಗೆ ದಾಖಲು

08:52 AM Dec 03, 2022 | Team Udayavani |

ಗದಗ: ಮೂವರ ಮೇಲೆ ಚಾಕು ಇರಿದು ಹಲ್ಲೆ ಮಾಡಿದ ಘಟನೆ ನಗರದ ಕಿಲ್ಲಾ ಓಣಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

Advertisement

ನಗರದ ಕಿಲ್ಲಾ ಓಣಿಯಲ್ಲಿನ ನಿವಾಸಿಗಳಾದ ಗೋಪಾಲ ಖೊಡೆ, ಮಾಧು ಬದಿ, ವಸಂತ ಬಾಕಳೆ ಎಂಬವರ ಮೇಲೆ ಹಲ್ಲೆ ನಡೆದಿದೆ.

ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ರಾತ್ರಿ ಊಟ ಮಾಡಿ‌ ಮನೆ ಹೊರಗಡೆ ಮಾತನಾಡುತ್ತ ನಿಂತವರ ಮೇಲೆ ಬೈಕ್ ಮೇಲೆ ಬಂದ ನಾಲ್ವರು ಚಾಕು ಇರಿದು ಹಲ್ಲೆ ಮಾಡಿದ್ದು, ಅವರ ಕಣ್ಣು, ಎದೆ, ಕೈ, ಹೊಟ್ಟೆ ಭಾಗಗಳಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಸೇಂಟ್ಲಿಮೆಂಟ್ ನ ಶಿವು, ಕಿಲ್ಲಾ ಓಣಿಯ ಸಾದಿಕ್ ಹಾಗೂ ವಿನೀಶ್ ಎಂಬವರ ಮೇಲೆ ಆರೋಪಗಳು ಕೇಳಿ ಬಂದಿದೆ.

ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next