Advertisement

Gadag; ಹಬ್ಬದ ಖರೀದಿಗೆಂದು ಮಾರುಕಟ್ಟೆಗೆ ಹೋಗಿದ್ದ ಪೊಲೀಸ್‌ ಸಿಬ್ಬಂದಿ ಅಪಘಾತದಲ್ಲಿ ಸಾವು!

01:18 PM Sep 06, 2024 | Team Udayavani |

ಗದಗ: ಕಾಂಕ್ರಿಟ್ ಲಾರಿ ಹರಿದು ಗಣೇಶ ಹಬ್ಬಕ್ಕೆ ಪೂಜಾ ಸಾಮಗ್ರಿ ಖರೀದಿಸಿ ಮನೆಗೆ ಹೊರಟಿದ್ದ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಶುಕ್ರವಾರ (ಸೆ.06) ಗದಗ ನಗರದ ಭೂಮರೆಡ್ಡಿ ಸರ್ಕಲ್ ಬಳಿ ನಡೆದಿದೆ.

Advertisement

ಗಜೇಂದ್ರಗಡ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಮೇಶ್ ಡಂಬಳ (45) ಸಾವನ್ನಪ್ಪಿದ್ದಾರೆ.

ರಮೇಶ್ ಅವರು ಮಾರ್ಕೆಟ್ ನಿಂದ ಹಣ್ಣು, ತರಕಾರಿ, ಪೂಜಾ ಸಾಮಗ್ರಿ ಖರೀದಿಸಿ ಮನೆಗೆ ಹೊರಟಿದ್ದರು. ಈ ವೇಳೆ ಕಾಂಕ್ರಿಟ್ ಲಾರಿಯು ಮಾರ್ಕೆಟ್ ಏರಿಯಾದಿಂದ ಎಪಿಎಂಸಿ ಬಳಿ‌ ಹೊರಟಿದ್ದರು. ಕಾಂಕ್ರಿಟ್ ಲಾರಿ ಓವರ್ ಟೆಕ್ ಮಾಡಿ ಹೋಗುವಾಗ ಅಪಘಾತ ನಡೆದಿದೆ. ಲಾರಿಯ ಚಕ್ರ‌ ತಲೆಯ ಮೇಲೆ ಹರಿದು ರಮೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಮೇಶ್‌ ಅವರು ನೈಟ್ ಡ್ಯೂಟಿ ಮುಗಿಸಿ ಹಬ್ಬದ ಖರೀದಿಗೆ ಮಾರ್ಕೆಟ್ ಗೆ ಬಂದಿದ್ದರು.

ಅಪಘಾತದಿಂದಾಗಿ ಭೂಮರೆಡ್ಡಿ ಸರ್ಕಲ್ ನಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

Advertisement

ಗದಗ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next