Advertisement

ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಅಂಕಿ ಅಂಶದ ರೂಪು ರೇಷೆ ಸಿದ್ದ: ಜಿ. ಪರಮೇಶ್ವರ್

08:10 PM May 23, 2023 | Team Udayavani |

ಕೊರಟಗೆರೆ: ಪ್ರವಾಸಿಕ್ಷೇತ್ರ ಮತ್ತು ಶ್ರೀಮಠಗಳ ಅಭಿವೃದ್ದಿಗೆ ನನ್ನ ಸಹಕಾರ ಇದ್ದೇ ಇರುತ್ತೇ. ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಈಗಾಗಲೇ ಅಂಕಿಅಂಶದ ರೂಪುರೇಷೆ ಸಿದ್ದವಾಗಿದೆ.

Advertisement

ಮುಂದಿನ 5 ವರ್ಷದ ಅವಧಿಯಲ್ಲಿ ಕೊರಟಗೆರೆಯು ಸಮಗ್ರ ಅಭಿವೃದ್ದಿಯ ಪಥದತ್ತಾ ಸಾಗಲಿದೆ. ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ 5 ಗ್ಯಾರಂಟಿಯು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾರಿಗೆ ಬರಲಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ ಭರವಸೆ ನೀಡಿದರು.

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಪಂ ಕೇಂದ್ರಸ್ಥಾನದ ಸಿದ್ದರಬೆಟ್ಟ ಶ್ರೀಬಾಳೆಹೊನ್ನೂರು ಖಾಸಾ ಶಾಖಾ ಶ್ರೀಮಠಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ಮಾತನಾಡಿದರು.

ಧಾರ್ಮಿಕ ಮತ್ತು ಪ್ರವಾಸಿ ಕ್ಷೇತ್ರದ ಅಭಿವೃದ್ದಿಗೆ ಪ್ರವಾಸೋದ್ಯಮ, ಅರಣ್ಯ, ತೋಟಗಾರಿಕೆ ಇಲಾಖೆಯ ಸಹಯೋಗದಿಂದ ಅಭಿವೃದ್ದಿ ಆಗಲಿವೆ. ಸಿದ್ದರಬೆಟ್ಟ ಶ್ರೀಕ್ಷೇತ್ರ ಸೇರಿದಂತೆ ಗೊರವನಹಳ್ಳಿಯ ಶ್ರಿಮಹಾಲಕ್ಷ್ಮೀ ದೇವಾಲಯ, ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿ ದೇವಾಲಯ ಮತ್ತು ಚನ್ನರಾಯನದುರ್ಗ ಏಳುಸುತ್ತಿನ ಕೋಟೆಯ ಅಭಿವೃದ್ದಿಗೆ ವಿಶೇಷ ಅನುಧಾನ ತರುತ್ತೇನೆ ಎಂದು ತಿಳಿಸಿದರು.

ಕಂಪನಿಗಳಿಗೆ ಪರಂ ಖಡಕ್ ಎಚ್ಚರಿಕೆ..
ತುಮಕುರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಖಾಸಗಿ ಕಂಪನಿಗಳು ಸ್ಥಳೀಯರಿಗೆ ಪ್ರಥಮ ಆಧ್ಯತೆ ನೀಡಬೇಕಿದೆ. ಉದ್ಯೋಗ ನೀಡುವಲ್ಲಿ ತಾರತಮ್ಮ ಮಾಡಿದರೇ ಅಂತಹ ಕಂಪನಿಗಳ ಲೈಸನ್ಸ್ ಮುಲಾಜಿಲ್ಲದೇ ರದ್ದು ಮಾಡುತ್ತೇವೆ. ಈಗಾಗಲೇ ಖಾಸಗಿ ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತೀಲ್ಲ ಎಂದು ಸಾಕಷ್ಟು ದೂರುಗಳು ಬಂದಿವೆ. ನಮ್ಮ ಸರಕಾರ ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಹೇಳಿದರು.

Advertisement

ಬೇಟಿಯ ವೇಳೆಯಲ್ಲಿ ಕೊರಟಗೆರೆ ಉಸ್ತುವಾರಿ ಕೇಶವಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಯುವಾಧ್ಯಕ್ಷ ವಿನಯ್, ಮುಖಂಡರಾದ ರೇಣುಕಾಪ್ರಸನ್ನ, ಶೇಖರ್, ವೀರಣ್ಣಗೌಡ, ಜೆಟ್ಟಿನಾಗರಾಜ್, ಸಿದ್ದಗಂಗಪ್ಪ, ಮಹೇಶ್, ಚಂದ್ರಶೇಖರ್, ಅರವಿಂದ್, ಪಟ್ಟನರಸಪ್ಪ, ರಮೇಶ್, ಕೃಷ್ಣಪ್ಪ, ಸೋಮಣ್ಣ, ಅಖಂಡರಾಧ್ಯ ಸೇರಿದಂತೆ ಇತರರು ಇದ್ದರು.

ಶ್ರೀಗಳ ಆರ್ಶಿವಾದ ಪಡೆದ ಡಾ.ಜಿ.ಪರಮೇಶ್ವರ..

ಚಿಕ್ಕತೋಟ್ಲುಕೆರೆಯ ಶ್ರೀಕ್ಷೇತ್ರ ಅಟವಿ ಮಠದ ಶ್ರೀಅಟವಿಶಿವಲಿಂಗ ಮಹಾಸ್ವಾಮಿ, ಸಿದ್ದರಬೆಟ್ಟದ ಶ್ರೀಬಾಳೆಹೊನ್ನೂರು ಖಾಸಾ ಶಾಖಾಮಠದ ಶ್ರೀವೀರಭದ್ರಶಿವಾಚಾರ್ಯ ಸ್ವಾಮೀಜಿ ಮತ್ತು ತಂಗನಹಳ್ಳಿಯ ಶ್ರೀಕಾಶಿಅನ್ನಪೂಣೇಶ್ವರಿ ಶ್ರೀಮಠದ ಶ್ರೀಬಸವಮಹಾಲಿಂಗ ಸ್ವಾಮೀಜಿ, ಬೆಳ್ಳಾವಿ ಖಾರದ ಶ್ರೀಮಠದ ಶ್ರೀವೀರಬಸವ ಮಹಾಸ್ವಾಮೀಜಿಯ ಆರ್ಶಿವಾದ ಪಡೆದ ಸಚಿವ ಡಾ.ಜಿ.ಪರಮೇಶ್ವರ ಶ್ರೀಮಠಗಳ ಧಾರ್ಮಿಕ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.

ಡಾ.ಜಿ.ಪರಮೇಶ್ವರ ಸಿದ್ದರಬೆಟ್ಟದ ಅಭಿವೃದ್ದಿಗೆ ೫೦ಲಕ್ಷ ಮತ್ತು ಶ್ರೀಮಠದ ಅಭಿವೃದ್ದಿಗೆ ಈಗಾಗಲೇ ೩೦ಲಕ್ಷ ಅನುಧಾನ ನೀಡಿದ್ದಾರೆ. ಪ್ರವಾಸಿ ಮತ್ತು ಪುಣ್ಯಕ್ಷೇತ್ರ ಅಭಿವೃದ್ದಿಗೆ ಸಚಿವರು ಅನುದಾನ ನೀಡುವ ಭರವಸೆ ನೀಡಿದ್ದಾರೆ. ಧಾರ್ಮಿಕ ಕೇಂದ್ರ ಮತ್ತು ಸಾಮಾಜಿಕ ಕ್ಷೇತ್ರದ ಅಭಿವೃದ್ದಿಗೆ ಸರಕಾರದ ಸಹಕಾರ ಅಗತ್ಯ. ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಸರಕಾರ ಮತ್ತು ಸಚಿವರ ಜೊತೆ ಅಧಿಕಾರಿಗಳ ಪಾತ್ರವು ಬಹುಮುಖ್ಯ.–

– ವೀರಭದ್ರಶಿವಚಾರ್ಯ ಸ್ವಾಮೀಜಿ. ಪೀಠಾಧ್ಯಕ್ಷ. ಸಿದ್ದರಬೆಟ್ಟ ಶ್ರೀಮಠ

ನನ್ನ ಕೊರಟಗೆರೆ ಕ್ಷೇತ್ರದ ಸ್ವಾಮೀಜಿಗಳಿಗೆ ನಾನು ವಿಜಯದ ಕೃತಜ್ಞತೆ ಸಲ್ಲಿಸಿದ್ದೇನೆ. ವಿಧಾನಸಭಾ ಅಧಿವೇಶನ ಮುಗಿದ ತಕ್ಷಣವೇ ನನ್ನ ಕ್ಷೇತ್ರದ ೩೬ಗ್ರಾಪಂಗಳಿಗೆ ಬೇಟಿ ನೀಡಿ ವಿಜಯೋತ್ಸವ ಆಚರಣೆ ಮಾಡ್ತೇನೆ. ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ ೫ಗ್ಯಾರಂಟಿಗಳು ರಾಜ್ಯ ಸರಕಾರದ ನಿಯಮದ ಅನುಸಾರ ಮುಂದಿನ ಸಂಪುಟ ಸಭೆಯಲ್ಲಿ ಈಡೇರುತ್ತೇ.

– ಡಾ.ಜಿ.ಪರಮೇಶ್ವರ. ಸಚಿವ. ಕೊರಟಗೆರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next