Advertisement

ಬೊಮ್ಮಾಯಿ ನೇತೃತ್ವದಲ್ಲೇ ಅವಧಿ ಪೂರ್ಣ: ಕೇಂದ್ರ ಸಚಿವ‌ ನಾರಾಯಣಸ್ವಾಮಿ

05:01 PM Aug 11, 2022 | Team Udayavani |

ಚಿತ್ರದುರ್ಗ: ಚುನಾವಣೆ ವೇಳೆ ಆಡಳಿತದಲ್ಲಿ ಗೊಂದಲ‌ ಸೃಷ್ಠಿಗೆ ಕಾಂಗ್ರೆಸ್ ಯತ್ನ ಮಾಡುತ್ತಿದ್ದು, ಕುತಂತ್ರ ಫಲ ನೀಡುವುದಿಲ್ಲ.ಬಿಜೆಪಿಯ ತೀರ್ಮಾನ, ಬಿ. ಎಸ್.ಯಡಿಯೂರಪ್ಪ ಅವರ ಸಂಕಲ್ಪದಂತೆ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಆಡಳಿತ ಅವಧಿ ಪೂರ್ಣಗೊಳಿಸುತ್ತೇವೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ  ಎ.ನಾರಾಯಣಸ್ವಾಮಿ ಗುರುವಾರ ಹೇಳಿಕೆ ನೀಡಿದ್ದಾರೆ.

Advertisement

ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿ, ಬಿಎಸ್ ವೈ, ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದರು.

ದಲಿತ ಸಿಎಂ ಕೂಗಿನ ಬಗ್ಗೆ ಪ್ರತಿಕ್ರಿಯಿಸಿ, ಖಂಡಿತವಾಗಿ ಎಲ್ಲಾ ಸಮುದಾಯಕ್ಕೂ ಅವಕಾಶ ಸಿಗಬೇಕು.ಬಿಜೆಪಿಯೂ ಹೊರತಾಗಿಲ್ಲ, ಬಿಜೆಪಿ ಎಲ್ಲಾ ವರ್ಗಕ್ಕೆ ಅವಕಾಶ ಕೊಡುತ್ತದೆ ಎಂದರು.

ಸಿದ್ದರಾಮಯ್ಯ 75ನೇ ಸ್ವಾತಂತ್ರ್ಯೋತ್ಸವದ ಬಗ್ಗೆಯೂ ರಾಜಕಾರಣ‌‌ ಮಾಡುತ್ತಿದ್ದಾರೆ. ದೇಶಪ್ರೇಮದ ಬಗ್ಗೆ ಪ್ರಶ್ನಿಸುವುದು ಅವರಿಗೆ ಶೋಭೆಯಲ್ಲ.ಧ್ವಜದ ತಿರಂಗಾದಲ್ಲಿರುವ ಬಣ್ಣದ ಬಗ್ಗೆ ಹೇಳುತ್ತಾ ಕೆಂಪು ಬಣ್ಣ ಎಂದು ತಪ್ಪಾಗಿ ಹೇಳಿ ಅಜ್ಞಾನ ಪ್ರದರ್ಶಿಸಿದ್ದಾರೆ. ಅವರು ಎಂಥ ದೇಶ ಭಕ್ತ ಎಂಬುದು ತಿಳಿದಿದೆ. ಬಿಜೆಪಿ, ಸಂಘ ಪರಿವಾರ, ಬಿಜೆಪಿ ಯುವ ಕಾರ್ಯಕರ್ತರು ಅವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದರು.

ಜಮ್ಮು- ಜಾಶ್ಮೀರದಲ್ಲಿ ಕಲಂ 370 ತೆಗೆದಿದ್ದೇವೆ. ಹಿಂದೂರಾಷ್ಟ್ರದ ಪರಿಕಲ್ಪನೆ, ಸ್ವಾಭಿಮಾನದಿಂದ ಎಲ್ಲಾ ವರ್ಗಗಳ ಜತೆ ಸಾಗಿದ್ದೇವೆ.ದೇಶದಲ್ಲಿ ರಾಮರಾಜ್ಯ ನಿರ್ಮಾಣ ಮಾಡುತ್ತೇವೆ‌. ರಾಮಮಂದಿರ ನಿರ್ಮಾಣದ ಮೂಲಕ ಶಾಂತಿ ಸಂದೇಶ ನೀಡುತ್ತೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next