ಕುಕ್ಕೆ: ಪ್ರಸಿದ್ದ ಸುಬ್ರಮಣ್ಯ ದೇವಸ್ಥಾನದಲ್ಲಿ ಷಷ್ಟಿ ಹಾಗೂ ಆಶ್ಲೇಷ ನಕ್ಷತ್ರ ದಿನವಾದ ರವಿವಾರ ಭಾರಿ ಜನಸಂದಣಿ ಕಂಡು ಬಂದಿದೆ. ಆಶ್ಲೇಷ ಪೂಜೆ ನೆರವೇರಿಸಲು ನಾಡಿನ ವಿವಿಧೆಡೆಯಿಂದ ಭಕ್ತ ಜನಸಾಗರವೇ ಹರಿದು ಬಂದಿದೆ.
ದೇಗುಲದ ರಥ ಬೀದಿ, ಹೊರಾಂಗಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿರುವ ಭಕ್ತರು ರಶೀದಿಗಾಗಿ ದುಂಬಾಲು ಬೀಳುತಿದ್ದಾರೆ. ಆದರೆ ಸೀಮಿತ ಸಂಖ್ಯೆಯಲ್ಲಿ ಸೇವಾ ರಶೀದಿ ವಿತರಿಸುತ್ತಿರುವುದರಿಂದ ದೂರದಿಂದ ಬಂದ ಭಕ್ತರಿಗೆ ರಶೀದಿ ಸಿಗದೆ ಸೇವಾ ಕೌಂಟರ್ ಸಿಬ್ಬಂದಿಗಳ ಜತೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು.
ಇದನ್ನೂ ಓದಿ:ಈ ರಾಶಿಯವರಿಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆ ಕೊನೆಗೊಳ್ಳುವ ಸೂಚನೆ!
ಭಕ್ತರು ರಥಬೀದಿಯಲ್ಲಿ ಸಾಲಾಗಿ ನಿಂತಿದ್ದಾರೆ. ಸರ್ಕಲ್ ನಿಂದ ಗೋಪುರದವರೆಗೆ ಸುಮಾರು ರಾತ್ರಿ 12 ಗಂಟೆಯಿಂದ ಬೆಳಗಿನ ಆರು ಗಂಟೆ ತನಕವು ಭಕ್ತರು ದಂಡು ಕಂಡು ಬಂತು.