Advertisement

ವಿದ್ಯುತ್‌-ಲೈನ್‌ಮನ್‌ಗಳ ಕೊರತೆ ಪೂರೈಸಿ

04:06 PM Jun 19, 2022 | Team Udayavani |

ಸವದತ್ತಿ: ಸ್ವಾತಂತ್ರ್ಯ ಪೂರ್ವದಲ್ಲಿ ಹಾಕಿದ ಕಬ್ಬಿಣದ ವಿದ್ಯುತ್‌ ಕಂಬಗಳು ಇಂದಿಗೂ ಕಾರ್ಯ ನಿರ್ವಹಿಸುತ್ತಿವೆ. ಅವುಗಳಿಂದ ಅವಘಡ ಸಂಭವಿಸಬಹುದು. ಆದ್ದರಿಂದ ಎಚ್ಚರ ವಹಿಸಿ. ಅವುಗಳನ್ನು ಶೀಘ್ರ ಬದಲಾಯಿಸಬೇಕು ಎಂದು ಪಂಚಾಯತ ಸದಸ್ಯರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಗಂಗಯ್ಯ ಅಮೋಘಿಮಠ ಹೇಳಿದರು.

Advertisement

ಹೀರೆಕುಂಬಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶನಿವಾರ ಹೆಸ್ಕಾಂ ಉಪ ವಿಭಾಗ ಮತ್ತು ಪಂಚಾಯತಿಯಿಂದ ಜರುಗಿದ ವಿದ್ಯುತ್‌ ಅದಾಲತ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮಕ್ಕೆ ನಿರಂತರ ವಿದ್ಯುತ್ತಿನ ಅಭಾವ ಮತ್ತು ಲೈನ್‌ಮನ್‌ಗಳ ಕೊರತೆ ಇದೆ. ವಿದ್ಯುತ್‌ ಏರಿಳಿತದಿಂದ ಗೃಹೋಪಯೋಗಿ ವಸ್ತುಗಳು ಹಾಳಾಗುತ್ತಿವೆ. ವಿದ್ಯುತ್‌ ಪೂರೈಕೆ ಮತ್ತು ಲೈನ್‌ಮನ್‌ ನೇಮಕಕ್ಕೆ ಚುಳಕಿ ಉಪಕೇಂದ್ರದ ಎದುರು ಹಲವು ಬಾರಿ ಅಹೋರಾತ್ರಿ ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ. ಆದರೆ ಇಲ್ಲಿನ ಅಧಿಕಾರಿಗಳು ರಾಜಕಾರಣಿಗಳಂತೆ ಆಶ್ವಾಸನೆ ನೀಡಿ ಕಾರ್ಯ ರೂಪಕ್ಕೆ ತರುತ್ತಿಲ್ಲವೆಂದು ಆಗ್ರಹಿಸಿದರು.

ಈ ವೇಳೆ ಗ್ರಾಪಂ ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next