Advertisement

ಸಾವಿರಾರು ಕೋಟಿ ರೂ. ಸಾಲ ವಂಚನೆ ಆರೋಪಿ ಮೆಹುಲ್‌ ಚೋಸ್ಕಿ ಕೊನೆಗೂ ಸೆರೆ

02:37 AM May 27, 2021 | Team Udayavani |

ಹೊಸದಿಲ್ಲಿ: ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ಮೆಹುಲ್‌ ಚೋಸ್ಕಿಯನ್ನು ಮತ್ತೆ ಬಂಧಿಸಲಾಗಿದೆ.

Advertisement

ಆ್ಯಂಟಿಗುವಾ ಮತ್ತು ಬಾರ್ಬುಡಾ ದಲ್ಲಿದ್ದ ಚೋಸ್ಕಿ ಇತ್ತೀಚೆಗಷ್ಟೇ ಅಲ್ಲಿಂದ ಪರಾರಿಯಾಗಿದ್ದ. ಆತನನ್ನು ಡೊಮಿನಿಕಾ ಪೊಲೀಸರು ಬುಧವಾರ ಬಂಧಿಸಿರು ವುದಾಗಿ ತಿಳಿದುಬಂದಿದೆ.

ಆತನ ಗಡಿಪಾರು ವಿಚಾರದಲ್ಲಿ ಭಾರತ ಸರಕಾರದ ಜತೆಗೆ ಸಹಕರಿಸು ವುದಾಗಿ ಆ್ಯಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗ್ಯಾಸ್ಟನ್‌ ಬ್ರೌನ್‌ ಭರವಸೆ ನೀಡಿದ್ದಾರೆ.

ಮೆಹುಲ್‌ ಚೋಸ್ಕಿ ದೇಶದ ಗೌರವಕ್ಕೆ ಧಕ್ಕೆ ತಂದಿದ್ದಾನೆ ಎಂದು ಅವರು ದೂರಿದರು. ಆತ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಆತನ ಪೌರತ್ವ ರದ್ದುಪಡಿಸಲಾಗುತ್ತದೆ ಎಂದಿದ್ದಾರೆ. ಸೋಂಕಿನ ಹಿನ್ನೆಲೆಯಲ್ಲಿ ವಿಮಾನ ಹಾರಾಟ ರದ್ದಾಗಿರುವುದರಿಂದ ಆತ ಬೋಟ್‌ ಮೂಲಕ ಪರಾರಿಯಾಗಿರುವ ಸಾಧ್ಯತೆಗಳಿವೆ ಎನ್ನಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next