Advertisement

ನಿರಾಶ್ರಿತರಿಗೆ ಹಣ್ಣು ವಿತರಣೆ

10:07 AM Jan 16, 2022 | Team Udayavani |

ಕಲಬುರಗಿ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಜನ್ಮ ದಿನದ ಅಂಗವಾಗಿ ನಗರದ ಅಫಜಲಪುರ ರಸ್ತೆಯಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ಶನಿವಾರ ಹಣ್ಣು -ಹಂಪಲು ವಿತರಿಸಲಾಯಿತು.

Advertisement

ಈಶ್ವರ ಖಂಡ್ರೆ ಸಾಬ್‌ ಅಭಿಮಾನಿಗಳ ರಾಜ್ಯ ಸಂಘದಿಂದ ಹಣ್ಣು ಹಂಪಲು ವಿತರಿಸಲಾಯಿತು. ಇದೆ ವೇಳೆ ಕಲಬುರಗಿ ದಕ್ಷಿಣ ಬ್ಲಾಕ್‌ ಅಧ್ಯಕ್ಷ ನೀಲಕಂಠರಾವ ಮೂಲಗೆ ಮಾತನಾಡಿ, ಸಮಾಜ ಸಂಘಟನೆ ಹಾಗೂ ಸಮಾಜ ಸೇವಾ ಕಾರ್ಯದಲ್ಲಿ ಈಶ್ವರ ಖಂಡ್ರೆ ಸದಾ ಮುಂಚೂಣಿಯಲ್ಲಿರುತ್ತಾರೆ ಎಂದರು.

ಮಾಜಿ ಮಹಾಪೌರ ಶರಣಕುಮಾರ ಮೋದಿ, ಮುಖಂಡರಾದ ಸಿದ್ಧುಗೌಡ ಅಫಜಲಪುರಕರ್‌, ಸುರೇಶ್‌ ಹಾದಿಮನಿ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್‌, ಮದನ ಬಂಡೆ, ಬಾಬುರಾವ್‌ ಬೀಳಗಿ, ಆಕಾಶ ಕಾಂಬಳೆ ಆಗಮಿಸಿದ್ದರು. ಸಂಘದ ರಾಜ್ಯಾಧ್ಯಕ್ಷ ದಶವಂತ್‌ ಕಣಮಸ್ಕರ ಕಾರ್ಯಕ್ರಮ ಆಯೋಜಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next